ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಗೆ ಕೊರೊನಾ ಲಕ್ಷಣ!!

ನವದೆಹಲಿ:

     ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರಲ್ಲಿ ಕೊವಿಡ್​-19 ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ನಾಳೆ (ಮಂಗಳವಾರ) ಮುಂಜಾನೆ ಟೆಸ್ಟ್​​ಗೆ ಒಳಗಾಗಲಿದ್ದಾರೆ.

     ಮುಖ್ಯಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಕೇಜ್ರಿವಾಲ್ ಅವರು ಸ್ವತಃ ಪ್ರತ್ಯೇಕ ವ್ಯವಸ್ಥೆಯಲ್ಲಿದ್ದಾರೆ. 

      ಭಾನುವಾರ ಮಧ್ಯಾಹ್ನದಿಂದ ಅವರಲ್ಲಿ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, ಆಗಿನಿಂದಲೇ ಸೆಲ್ಫ್​ ಐಸೋಲೇಟ್​ ಆಗಿದ್ದಾರೆ. ತಾವು ನಡೆಸಬೇಕಿದ್ದ ಎಲ್ಲ ಸಭೆಗಳನ್ನೂ ರದ್ದುಗೊಳಿಸಿದ್ದಾರೆ.

      ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಕೆಮ್ಮು ಮತ್ತು ಮಧುಮೇಹದ ಸಮಸ್ಯೆಯಿದೆ. ಇದೀಗ ಗಂಟಲು ನೋವು ಸಹಿತ ಜ್ವರಕ್ಕೆ ತುತ್ತಾಗಿರುವ ಅರವಿಂದ್​ ಕೇಜ್ರಿವಾಲ್​ಗೆ ಒಂದು ದಿನ ಕಾದು, ನಂತರ ತಪಾಸಣೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಸೆಲ್ಫ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

      ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರೊನಾ ಸೋಂಕು ವಿಪರೀತ ಪ್ರಸರಣವಾಗುತ್ತಿದೆ. ಕಳೆದ ಒಂದು ವಾರದಿಂದ ಪ್ರತಿದಿನ 1000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ