ಕೊರೊನಾ ಭೀತಿಯಿಂದ IRS ಅಧಿಕಾರಿ ಆತ್ಮಹತ್ಯೆಗೆ ಶರಣು!!

ನವದೆಹಲಿ : 

     ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 

      56 ವರ್ಷ ವಯಸ್ಸಿನ ವ್ಯಕ್ತಿ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕಾರಿನೊಳಗೆ ಆ್ಯಸಿಡ್​ ತರಹದ ದ್ರಾವಣವನ್ನು ಕುಡಿದು ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

     ಕಾರಿನೊಳಗೆ ಡೆತ್​ ನೋಟ್​ ಕೂಡ ಸಿಕ್ಕಿದ್ದು, ‘ನನ್ನಿಂದ ನನ್ನ ಕುಟುಂಬದವರಿಗೆ ಕೊರೊನಾ ಸೋಂಕು ಹರಡುವುದು ಬೇಡ, ನನ್ನಿಂದಾಗಿ ಅವರು ಬಳಲುವುದು ಬೇಡ’ ಎಂದು ಬರೆದಿದ್ದಾರೆ.

      ಒಂದು ವಾರದ ಹಿಂದೆ ಮೃತ IRS ಅಧಿಕಾರಿ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದರು. ವರದಿ ನೆಗಟಿವ್​ ಬಂದಿತ್ತು. ಆದರೂ ಕೂಡ ತನ್ನಿಂದಾಗಿ ಮಹಾಮಾರಿ ತನ್ನ ಕುಟುಂಬದವರಿಗೆ ಅಂಟುವುದು ಬೇಡ ಅಂತಾ ಈ ನಿರ್ಧಾರ ಮಾಡಿದ್ದಾರೆ ಎಂದು ದಕ್ಷಿಣ ದ್ವಾರಕಾ ಠಾಣೆಯ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap