ನೋಟ್ ಬ್ಯಾನ್ ದುರಂತವಲ್ಲ, ದೊಡ್ಡ ಹಗರಣ!

 ದೆಹಲಿ:

     ನೋಟ್‌ ಬ್ಯಾನ್‌ ದುರಂತವಲ್ಲ. ಮೋದಿ ಸರಕಾರದ ಒಂದು ದೊಡ್ಡ ಹಗರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಟೀಕೆ ಮಾಡಿದ್ದಾರೆ.

      ಕೇಜ್ರಿವಾಲ್ ಕೇಂದ್ರ ಬಜೆಟ್ – 2019 ಆರಂಭಕ್ಕೂ ಮುನ್ನ ಟ್ವೀಟ್‌ ಮಾಡುವ ಮೂಲಕ ಆರೋಪ ಮಾಡಿರುವ ಅವರು, ನೋಟ್ ಬ್ಯಾನ್ ದೇಶದ ಆರ್ಥಿಕತೆಯನ್ನೇ ಹಾಳು ಮಾಡಿದೆ. ನೋಟು ಅಮಾನ್ಯೀಕರಣ ದುರಂತವಲ್ಲ. ಮೋದಿ ಸರಕಾರದ ದೊಡ್ಡ ಹಗರಣ ಎಂದು ಟೀಕಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂಬ ಎನ್‍ಎಸ್‍ಎಸ್‍ಒ ಅಂಕಿ ಸಂಖ್ಯೆ ಮಾಹಿತಿಯನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

      ಸ್ವಾತಂತ್ರ್ಯನಂತರ ಹಿಂದೆಂದೂ ಕಾಣದಂತಹ ನಿರುದ್ಯೋಗ ಸಮಸ್ಯೆ ಈಗ ದೇಶದಲ್ಲಿ ಸೃಷ್ಟಿಯಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

 

Recent Articles

spot_img

Related Stories

Share via
Copy link
Powered by Social Snap