ನೊಯ್ಡಾ:
ಮದ್ಯಪಾನ ಮಾಡಿ, ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಅಪಾಯಕಾರಿ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ಸುಂದರ್ ಪಂಡಿತ್ ಮೃತ ದುರ್ದೈವಿ. ಬರೋಲಾ ಪ್ರದೇಶದಲ್ಲಿ ವಾಸವಿದ್ದ ಇವರಿಗೆ ಸೆಕ್ಟರ್ 107ಅಲ್ಲಿ ಮತ್ತೊಂದು ಮನೆಯಿದೆ. ಅಲ್ಲಿಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೋಗುತ್ತಿದ್ದರು.
ಯಾವಾಗಲೂ ಮದ್ಯಪಾನ ಮಾಡುತ್ತಿದ್ದ ಸುಂದರ್, ಬೇಸ್ಮೆಂಟ್’ನಲ್ಲಿ ಕಾರು ಪಾರ್ಕ್ ಮಾಡುವಷ್ಟರಲ್ಲಿ ನಿದ್ದೆ ಬಂದಿದೆ. ಎ.ಸಿ. ಆನ್ ಇತ್ತು. ಹಾಗೆಯಾ ನಿದ್ದೆಗೆ ಜಾರಿಬಿಟ್ಟಿದ್ದಾರೆ.
ಮರುದಿನ ಬೆಳಗ್ಗೆ ಬೇಸ್ಮೆಂಟ್ಲ್ಲಿ ಕಾರು ಇದ್ದಿದ್ದನ್ನು ಗಮನಿಸಿದ ಅವರ ಸಹೋದರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿಯವರೆಗೆ ಅವರು ಮೃತಪಟ್ಟಿದ್ದರು.
ಎಲ್ಲ ಕಿಟಿಕಿಗಳು ಬಂದ್ ಇದ್ದು, ಎ.ಸಿ ಆನ್ ಇದ್ದ ಕಾರಣ, ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಪಸರಿಸಿದೆ. ಈ ವಿಷ ಅನಿಲವನ್ನು ಸೇವಿಸಿರುವ ಕಾರಣ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/car-drinks.jpg)