ಚಿಕ್ಕಬಳ್ಳಾಪುರ:
ಕುರಿ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 13 ಕುರಿ ಬೆಂಕಿಗಾಹುತಿಯಾದ ಘಟನೆ ಚಿಕ್ಕಬಳ್ಳಾಪುರದ ಇಟ್ಟಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಸಂತಮ್ಮ ಎಂಬುವರಿಗೆ ಸೇರಿದ ಕುರಿ ಕೊಟ್ಟಿಗೆಗೆ ಬೆಂಕಿ ಬಿದ್ದು ಸ್ಥಳದಲ್ಲಿಯೇ 13 ಕುರಿಗಳು ಸಾವನ್ನಪ್ಪಿವೆ. ಅಪಘಾತದಿಂದ ಸುಮಾರು 30 ಕುರಿಗಳು ಕಣ್ಣು ಕಳೆದುಕೊಂಡಿವೆ. ಕುರಿಗಳ ಕಣ್ಣು ಸೂಕ್ಷ್ಮವಾಗಿದ್ದು ಬೆಂಕಿ ಕೆನ್ನಾಲಿಗೆಗೆ ಕಣ್ಣು ಸಿಡಿದು ಸ್ಥಿತಿ ಗಂಭೀರವಾಗಿದೆ
ಘಟನೆಯಿಂದ ಕುರಿ ಮಾಲೀಕ ಕಂಗಾಲಾಗಿದ್ದು, ಸರಿ ಸುಮಾರು 4 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್ಐ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/Fire-Flames.gif)