RBI ಜೆನರಲ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು!!

ಒಡಿಶಾ :

      ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ)ನ ಗುವಾಹಟಿ ಶಾಖೆಯ ಜನರಲ್ ಮ್ಯಾನೇಜರ್‌ವೊಬ್ಬರು ಜಾಜ್ಪುರದ ಹೊಟೇಲೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

      ಮೃತ ವ್ಯಕ್ತಿಯನ್ನು ಜೈಪುರ ಜಿಲ್ಲೆಯ ನರಹರಿಪುರದಲ್ಲಿ ಗ್ರಾಮದ ಆಶೀಶ್ ರಂಜನ್ ಸಮಾಲ್ ಎಂದು ಗುರುತಿಸಲಾಗಿದೆ. ಇವರು ಗುರುವಾರ ತಮ್ಮ ತಾಯಿಯನ್ನು ಭೇಟಿಯಾಗಲು ಸ್ವಗ್ರಾಮಕ್ಕೆ ಆಗಮಿಸಿದ್ದರು. ಅದಾದ ನಂತರ ಅವರು ಕಳಿಂಗ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ (ಕೆಐಐಎಂಎಸ್) ವೈದ್ಯರಾಗಿರುವ ತಮ್ಮ ಪತ್ನಿ ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ಮಗನ ಭೇಟಿಗೆ ಭುವನೇಶ್ವರಕ್ಕೆ ತೆರಳಿದ್ದರು.

      ನಂತರ ಅಧಿಕಾರಿ ಸಮಲ್ ಗುರುವಾರ ಮಧ್ಯಾಹ್ನ ಹೊಟೇಲ್ ಪ್ರವೇಶಿಸಿದ್ದರು. ಶುಕ್ರವಾರ ಬೆಳಗ್ಗೆ ಹೊಟೇಲ್ ಸಿಬ್ಬಂದಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಬಾರದ್ದರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕೋಣೆಯ ಸೀಲಿಂಗ್ ಫ್ಯಾನ್‍ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

      ಸಮಲ್ ಸಾವಿನ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಬರಾಚನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್
ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ