ಬೆಂಗಳೂರು:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-2 ಮರು ಉಡ್ಡಯನಕ್ಕೆ ಜುಲೈ 21-22ರಂದು ಮುಂದಾಗಿದೆ ಎನ್ನಲಾಗಿದೆ.
ಈ ಹಿಂದೆ ಇದೇ ಜುಲೈ 15ರಂದು ಬೆಳಗ್ಗಿನಜಾವ 2.51ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆಯಾಗಬೇಕಿತ್ತು. ಆದರೆ, ಉಡ್ಡಯನ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದಿಂದಾಗಿ ರದ್ದು ಮಾಡಲಾಗಿತ್ತು. ವಿಜ್ಞಾನಿಗಳು-ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿ ಎಲ್ಲವನ್ನು ಸರಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇಸ್ರೋ ಜು.22ರಂದು ಮುಂಜಾನೆ ಅಂದರೆ ಜು.15ರಂದು ನಿಶ್ಚಯಿಸಿದಂತೆ ತಡರಾತ್ರಿ 2.51ಕ್ಕೆ ಉಡಾವಣೆ ಮಾಡಲು ನಿರ್ಧರಿಸಿತ್ತು. ಆದರೆ ನಂತರ ಜು.21 ಅಂದರೆ ಭಾನುವಾರ ಮಧ್ಯಾಹ್ನದ ನಂತರ ಉಡ್ಡಯನ ಮಾಡುವುದು ಎನ್ನಲಾಗಿದೆ. ಈ ಬಗ್ಗೆ ಇಸ್ರೋ ಇನ್ನೂ ದಿನಾಂಕವನ್ನು ಅಧಿಕೃತಗೊಳಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/chandrayana.gif)