ಶ್ರೀನಗರ :
ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಶ್ರೀನಗರದ ಬಾಟೋಟ್ ಪ್ರದೇಶದಲ್ಲಿ ಉಗ್ರರು ಸ್ಥಳೀಯರ ಮೇಲೆ ಭಾರೀ ದಾಳಿಗೆ ಯತ್ನಿಸಿ ವಿಫಲವಾಗಿದ್ದಾರೆ ಎನ್ನಲಾಗಿದೆ.
2-3 ಜನ ಉಗ್ರರ ಗುಂಪೊಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕ ಬಸ್ಸೊಂದನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಕೂಡಲೇ ಚಾಲಕ ವೇಗವಾಗಿ ಬಸ್ಸನ್ನು ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉಗ್ರರು ಭಾರತೀಯ ಸೇನೆಯ ಯೋಧರ ಸಮವಸ್ತ್ರ ಧರಿಸಿದ್ದರೆಂದೂ ಚಾಲಕ ತಿಳಿಸಿದ್ದಾರೆ. ತಕ್ಷಣವೇ ಭಾರತ ಸೇನಾ ಸಿಬ್ಬಂದಿ ಉಗ್ರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಬಳಿಕ ಖಚಿತ ಮಾಹಿತಿ ಮೇರೆಗೆ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಗಂದೇರ್ಬಾಲ್ ಪ್ರದೇಶದಲ್ಲಿದ್ದ ಉಗ್ರರ ಮನೆಗೆ ನುಗ್ಗಿದ ಭದ್ರತಾ ಸಿಬ್ಬಂದಿ, ಗುಂಡಿನ ಚಕಮಕಿ ನಡೆಸಿದ್ದಾರೆ. ಅಲ್ಲದೇ ಈ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/03/army.gif)