‘1 ವಾರದೊಳಗೆ ಅಭಿನಂದನ್ ಬಿಡುಗಡೆಯಾಗಬೇಕು’ – ಪಾಕ್ ಗೆ ಭಾರತದ ವಾರ್ನ್!!

ನವದೆಹಲಿ:

      ಒಂದು ವಾರದೊಳಗೆ ಪಾಕ್ ಸೆರೆ ಹಿಡಿದಿರುವ ನಮ್ಮ ಕಮಾಂಡರ್ ನ್ನು ಬಿಡುಗಡೆ ಮಾಡಲೇಬೇಕು. ಇಲ್ಲದಿದ್ದರೆ, ಇದಕ್ಕೆ ಪಾಕಿಸ್ತಾನವೇ ನೇರ ಹೊಣೆಯಾಗುತ್ತದೆ ಎಂಬ ಕಟು ಸಂದೇಶವನ್ನು ಪಾಕ್ ಗೆ ಭಾರತ ರವಾನಿಸಿದೆ.

      ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ  ಜಾಗತಿಕ ಸಮುದಾಯದ ಮೇಲೆ ಒತ್ತಡ ಹಾಕಿರುವ ಭಾರತ, ಒಂದು ವಾರದೊಳಗೆ ಪಾಕ್ ಸೆರೆ ಹಿಡಿದಿರುವ ನಮ್ಮ ಕಮಾಂಡರ್ ನ್ನು ಬಿಡುಗಡೆ ಮಾಡಲೇಬೇಕು. ಇಲ್ಲದಿದ್ದರೆ ಕಾನೂನು ಬಾಹಿರವಾಗುತ್ತದೆ. ಇದಕ್ಕೆ ಪಾಕಿಸ್ತಾನವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 

      ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್,  ಭಾರತವು ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಂಡರೆ ನಾವು ಅಭಿನಂದನ್ ಅವ್ರನ್ನು ಬಿಡುಗಡೆ ಮಾಡುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ.

      ಪಾಕಿಸ್ತಾನದ ಈ ವರಸೆಗೆ ಪ್ರತಿಕ್ರಿಯೆ ನೀಡಿದ ಭಾರತ, ‘ನಾವು ಪಾಕಿಸ್ತಾನದ ಸೇನೆಯನ್ನಾಗಲೀ, ಜನರನ್ನಾಗಲೀ ಗುರಿಯಾಗಿಸಿ ದಾಳಿ ಮಾಡುತ್ತಿಲ್ಲ. ನಮ್ಮ ದಾಳಿ ಏನಿದ್ದರೂ ಉಗ್ರರ ಮೇಲೆ. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದಿದೆ.

       ಅಲ್ಲದೇ ಜಿನಿವಾ ಒಪ್ಪಂದದಂತೆ ‘ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಮಾನವೀಯ ದೃಷ್ಟಿಯಿಂದ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಅವರನ್ನು ಯಾವುದೇ ಶರತ್ತುಗಳಿಲ್ಲದೆ ಶೀಘ್ರವೇ ಬಿಡುಗಡೆ ಮಾಡಬೇಕು. ಒಂದು ವೇಳೆ ದೈಹಿಕವಾಗಿ ಇಲ್ಲವೇ ಮಾನಸಿಕವಾಗಿ ಕಿರುಕುಳ ನೀಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ಪಾಕ್‍ಗೆ ಎಚ್ಚರಿಕೆ ನೀಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap