ತಿರುಪತಿ :
ಏಳು ಬೆಟ್ಟಗಳ ಒಡೆಯ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವ ರ ಸ್ವಾಮಿಗೂ ಕೊರೊನಾ ಎಫೆಕ್ಟ್ ತಟ್ಟಿದ್ದು, ದೇವಾಲಯ ಬಂದ್ ಆಗಿದೆ.
ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ತಿರುಪತಿ ತಿರುಮಲ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಏಪ್ರಿಲ್ 14 ರವರೆಗೆ ಎಂದು ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ತಿಳಿಸಿದೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೂ ಸಹಾ ಏಪ್ರಿಲ್ 14 ರವರೆಗೆ ನಿಷೇಧಿಸಲಾಗಿದೆ. ಹೀಗಾಗಿ ಪ್ರತ್ಯೇಕ ಪ್ರವೇಶಕ್ಕೆ 300 ರೂ. ಕೊಟ್ಟು ಟಿಕೆಟ್ ಬುಕ್ ಮಾಡಿರುವ ಭಕ್ತರು ತಮ್ಮ ಪ್ರವೇಶವನ್ನು ಮುಂದೂಡಲು ಅಥವಾ ಟಿಕೆಟ್ ರದ್ದು ಮಾಡಿಕೊಂಡರೆ ಹಣ ವಾಪಸ್ ನೀಡುವುದಾಗಿ ಟಿಟಿಡಿ ಹೇಳಿದೆ.
ಅಲ್ಲದೇ ಕೊರೊನಾ ಭೀತಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ, ಬಡವರಿಗೆ, ಭಿಕ್ಷುಕರು ಸೇರಿದಂತೆ ದಿನಕ್ಕೆ 50 ಸಾವಿರ ಮಂದಿಗೆ ಟಿಟಿಡಿ ಆಹಾರ ನೀಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/Tirupathi.gif)