ಉಗ್ರರಿಗೆ ಆಶ್ರಯ : ಡಿವೈಎಸ್ಪಿ ದೇವೇಂದ್ರಸಿಂಗ್ ಅಮಾನತು!!!

ಶ್ರೀನಗರ :

     ಮೂವರು ಉಗ್ರರಿಗೆ ತನ್ನ ನಿವಾಸದಲ್ಲಿ ಆಶ್ರಯ ನೀಡಿದ್ದ ಡಿವೈಎಸ್ ಪಿ ದೇವೇಂದ್ರ ಸಿಂಗ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

     ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು.

      ಜಮ್ಮು ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದಲ್ಲಿರುವ ನಿವಾಸದಲ್ಲಿಯೇ ಮೂವರು ಉಗ್ರರಿಗೆ ದೇವೇಂದ್ರ ಸಿಂಗ್ ಆಶ್ರಯ ನೀಡಿದ್ದರು.

      ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್‌– ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜೊತೆಗೆ ಹಿರಿಯ ಪೊಲೀಸ್​ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡ ಜಮ್ಮು- ಕಾಶ್ಮೀರದ ಪೊಲೀಸರು ವಿಚಾರಣೆ ಮುಂದುವರೆಸಿದ್ದರು.

      ದೇವೇಂದ್ರ ಸಿಂಗ್ ಅವರ ನಿವಾಸವನ್ನು ಶೋಧಿಸಿರುವ ಪೊಲೀಸರು ಎರಡು ಪಿಸ್ತೂಲ್ , ಒಂದು ಎಕೆ ರೈಫಲ್ ಅಲ್ಲದೇ ಭಾರಿ ಪ್ರಮಾಣದ ಸ್ಟೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ನೀಡಲು ಅವರ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ, ಈ ಪ್ರಕರಣದಿಂದಾಗಿ ಅದನ್ನು ತಡೆಹಿಡಿಯುವ ಹಾಗೂ ಕಳೆದ ವರ್ಷ ನೀಡಲಾಗಿದ್ದ ರಾಷ್ಟ್ರಪತಿ ಪದಕವನ್ನು ವಾಪಾಸ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap