ಅಭ್ಯರ್ಥಿಯಿಂದಲೇ ಇವಿಎಂ ಯಂತ್ರ ಪುಡಿ ಪುಡಿ!!

ಅಮರಾವತಿ:

      ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಯೇ ಇವಿಎಂ ಯಂತ್ರವನ್ನು ನೆಲಕ್ಕೆ ಎತ್ತಿ ಹಾಕಿರುವ ಘಟನೆ ನಡೆದಿದೆ.

      ಅನಂತಪುರ ಜಿಲ್ಲೆಯ ಗುಂಟ್ಕಲ್ ಕ್ಷೇತ್ರದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಮತ ಯಂತ್ರವನ್ನು ಪೀಸ್ ಪೀಸ್ ಮಾಡಿರುವ ಅಭ್ಯರ್ಥಿಯಾಗಿದ್ದಾರೆ.

      ಚುನಾವಣಾ ನಿಯಮಗಳ ಪ್ರಕಾರ ಇವಿಎಂ ಯಂತ್ರದ ಕ್ರಮ ಸಂಖ್ಯೆಗಳ ಸಾಲಿನಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಹೆಸರನ್ನು ಮೊದಲಿಗೆ ಮುದ್ರಿಸಬೇಕಿತ್ತು. ಆದರೆ, ಚುನಾವಣಾ ಅಧಿಕಾರಿಗಳು ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೆಸರನ್ನು ಮೊದಲಿಗೆ ಮುದ್ರಿಸಿದ್ದು, ಮಧುಸೂದನ್ ಹೆಸರನ್ನು ಕೊನೆಯಲ್ಲಿ ಮುದ್ರಿಸಿದ್ದರು. ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೊರತಾಗಿ ಉಳಿದ ಅಭ್ಯರ್ಥಿಗಳ ಚಿಹ್ನೆಯನ್ನು ಅಸ್ಪಷ್ಟವಾಗಿ ಮುದ್ರಿಸಲಾಗಿತ್ತು. ಇದು ಜನಸೇನಾ ಅಭ್ಯರ್ಥಿ ಮಧುಸೂದನ್‌ರನ್ನು ಕೆರಳಿಸಿತ್ತು. ಆದ್ದರಿಂದ ಇವಿಎಂ ಒಡೆದು ಹಾಕುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

      ಮೊದಲ ಹಂತದ ಮತದಾನದ ದಿನವೇ ಆಂಧ್ರಪ್ರದೇಶದಲ್ಲಿ ಅಹಿತಕರ ಘಟನೆ ನಡೆದಿದ್ದು, ಇವಿಎಂ ಯಂತ್ರವನ್ನು ನೆಲಕ್ಕೆಸೆದು ಹಾನಿಗೊಳಿಸಿದ ಪರಿಣಾಮ ಖ್ಯಾತ ನಟ ಪವನ್‌ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಎಂಬುವವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap