ಲಕ್ನೋ :

ಸರ್ಕಾರಿ ಶಾಲೆಯಲ್ಲಿ ನೀಡಿದ ಊಟದಲ್ಲಿ ಸತ್ತ ಇಲಿಯನ್ನು ಸೇರಿಸಿ ಬೇಯಿಸಲಾಗಿದ್ದು, ಊಟ ಸೇವಿಸಿದ 9 ಜನ ಮಕ್ಕಳು ಹಾಗೂ ಶಿಕ್ಷಕರು ಅಸ್ವಸ್ಥಗೊಂಡಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ಎಂಬಲ್ಲಿ ಈ ಘಟನೆ ನಡೆದಿದೆ. ಜನ ಕಲ್ಯಾಣ ಸಂಸ್ಥಾ ಸಮಿತಿ ಎಂಬ ಎನ್ಜಿಒ ಇಲ್ಲಿನ ಸರ್ಕಾರ ಶಾಲೆಗೆ ಬಿಸಿಯೂಟ ಸರಬರಾಜು ಮಾಡಿದೆ. ದಾಲ್ ತೆಗೆದುಕೊಳ್ಳುವಾಗ ನಮಗೆ ಇಲಿ ಕಾಣಿಸಿತು ಉದ್ದಿನ ಬೆಳೆಯ ಡಬ್ಬದ ತಳಭಾಗದಲ್ಲಿ ಇಲಿ ಇತ್ತು. ಇದೇ ಊಟವನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಆರನೇ ತರಗತಿ ವಿದ್ಯಾರ್ಥಿ ಶಿವಾಂಗ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಶಿಕ್ಷಣ ಅಧಿಕಾರಿ ರಾಮ್ ಸಾಗರ್ ತ್ರಿಪಾಠಿ ಆಘಾತ ವ್ಯಕ್ತಪಡಿಸಿದ್ದು, ಇದು ಸಂಪೂರ್ಣ ನಿರ್ಲಕ್ಷ್ಯದಿಂದ ಕೂಡಿದೆ. ಈ ಕುರಿತು ಎನ್ಜಿಒ ಮೇಲೆ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








