ಪುಣೆ :
ಮಹಾರಾಷ್ಟ್ರದ ನಾಸಿಕ್ನ ಎನ್ಸಿಪಿ ಮುಖಂಡರೊಬ್ಬರು ಕಾರ್ನಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸಂಜಯ್ ಶಿಂದೆ(55ವರ್ಷ) ಮೃತ ಎನ್ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ) ಮುಖಂಡ. ಅವರು ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ತಮ್ಮ ಕಾರ್ನಲ್ಲಿ ಪ್ರಯಾಣಿಸುತ್ತಿದ್ದರು. ಪಿಂಪಲ್ಗಾವನ್ ಬಸ್ವಂತ್ ಟೋಲ್ ಪ್ಲಾಜಾ ಸಮೀಪ ಕಾರ್ನಲ್ಲಿ ವೈರಿಂಗ್ನಲ್ಲಿ ಉಂಟಾದ ಸಮಸ್ಯೆಯಿಂದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ.
ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಶಿಂದೆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲದೇ ಕಾರಿನಿಂದ ಹೊರ ಬರಲು ಪ್ರಯತ್ನಿಸಿದಾಗ ಬಾಗಿಲು ಲಾಕ್ ಆಗಿತ್ತು. ಅಲ್ಲದೇ ಕಾರಿನ ಗಾಜನ್ನು ಒಡೆದು ಹೊರಬರಲು ಯತ್ನಿಸಿದ್ದರು, ಆದರೆ ಅದೂ ಸಾಧ್ಯವಾಗಲಿಲ್ಲ. ಬೆಂಕಿ ಒಳಗೆ ಆವರಿಸಿದ್ದರಿಂದ ಶಿಂದೆ ಜೀವಂತವಾಗಿ ಸುಟ್ಟು ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿಂಧೆ ಅವರು ನಾಸಿಕ್ನಲ್ಲಿ ದ್ರಾಕ್ಷಿ ಹಣ್ಣು ರಫ್ತುದಾರರಾಗಿದ್ದಾರೆ. ನಾಸಿಕ್ ವೈನ್ ಉದ್ಯಮಕ್ಕೆ ಹೆಸರುವಾಸಿ. ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ಖರೀದಿಸಲು ಅವರು ಪಿಂಪಲ್ಗಾವನ್ಗೆ ತೆರಳುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/NCP.jpg-fire-death.jpg)