ನುಡಿದಂತೆ ನಡೆದ ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ..!!

ವಿಜಯವಾಡ:

  ಆಂಧ್ರ ಪ್ರದೇಶದ  ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ್ದ ಜಗನ್​ ಮೋಹನ ರೆಡ್ಡಿ ಆ ವೇಳೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು.

  ಅಂದು ಹೇಳಿದಂತೆ  ಆಂಧ್ರ ಪ್ರದೇಶದ  ಮುಖ್ಯಮಂತ್ರಿ ಜಗನ್​ ಮೋಹನ ರೆಡ್ಡಿ ಉದ್ಯೋಗ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.   2019ರ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳ ಕಾಯ್ದೆಯ ಅನ್ವಯ ಖಾಸಗಿ ಘಟಕ, ಕಾರ್ಖಾನೆಗಳು, ಜಂಟಿ ಉದ್ಯಮಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75ರಷ್ಟು ಉದ್ಯೋಗ ನೀಡುವ ಕಾಯ್ದೆಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದೆ. ಇದು ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಡೆದಿದೆ.

   ನೂತನ ನಿಯಮದ ಅನ್ವಯ ಸ್ಥಳೀಯರಿಗೆ ಉದ್ಯೋಗ ನೀಡುವ ವೇಳೆ ಅವರಲ್ಲಿ ಅವಶ್ಯಕ ಕೌಶಲ್ಯ ಇಲ್ಲವಾದಲ್ಲಿ ಕಂಪನಿ ಸೂಕ್ತ ತರಬೇತಿ ನೀಡಬೇಕು ಮತ್ತು ಇದರಲ್ಲಿ ಸರ್ಕಾರ ಸಹ ಪಾಲುದಾರಿಕೆಯನ್ನು ವಹಿಸಲಿದೆ . ಯಾವುದೇ ಖಾಸಗಿ ಕಂಪನಿಗಳು ಕೌಶಲ್ಯದ ಕಾರಣ ನೀಡಿ ಸ್ಥಳೀಯರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಜಗನ್ ಸರ್ಕಾರ ತಿಳಿಸಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap