ಪ್ರೇಯಸಿಗೆ ವಿಷ ಕುಡಿಸಿದ ತಾನು ವಿಷ ಕುಡಿದ ಪ್ರಿಯಕರ

ಬಾಗಲಕೋಟೆ: 

         ಯುವಕನೋರ್ವ ಪ್ರೇಯಸಿಗೆ ಅರಿಷಿಣದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ. ಅಲ್ಲದೆ, ತಾನೂ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಲ್ಲಿಕೇರಿ ಗ್ರಾಮದ ಬಳಿ ನಡೆದಿದೆ.

       ಎಸ್​.ಪಿ. ಕುಮಾರ ಪಾಟೀಲ್ (20) ಎಂಬಾತ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ಈತ ಹತ್ತನೇ ತರಗತಿ ಓದುತ್ತಿರುವ ತನ್ನ  ಪ್ರೇಯಸಿಗೆ ತಾಳಿ ಕಟ್ಟಿ ನಂತರ ಈ ಕೃತ್ಯವೆಸಗಿದ್ದಾನೆ. ಬಾಲಕಿ ಮತ್ತು ಕುಮಾರ ಪಾಟೀಲ್ ಕೆಲ ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರ ಗಮನಕ್ಕೆ ಬಂದಾಗ ಎಚ್ಚರಿಕೆ ಕೋಟ್ಟಿದ್ದರು .

 ತಾನು ಪ್ರೀತಿಸಿದ ಪ್ರೇಯಸಿ ಬೇರೆಯವರ ಪಾಲಾಗುಬಹುದು ಎಂಬ ಭಯದಿಂದ ಕುಮಾರ್​, ಆಕೆಯನ್ನು ಶಾಲೆಯಿಂದ ಗ್ರಾಮದ ಹೊರಗೆ ಕರೆದೊಯ್ದು ಅರಿಶಿಣದ ತಾಳಿ ಕಟ್ಟಿದ್ದಾನೆ. ನಂತರ ಆಕೆಗೂ ವಿಷ ಕುಡಿಸಿ, ಈತನು ವಿಷ ಕುಡಿದಿದ್ದಾನೆ. ಹುಡುಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಹುಡುಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಈ ಕುರಿತು ಗುಳೇದಗುಡ್ಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap