ಬಾಗಲಕೋಟೆ:
ಯುವಕನೋರ್ವ ಪ್ರೇಯಸಿಗೆ ಅರಿಷಿಣದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ. ಅಲ್ಲದೆ, ತಾನೂ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಲ್ಲಿಕೇರಿ ಗ್ರಾಮದ ಬಳಿ ನಡೆದಿದೆ.
ಎಸ್.ಪಿ. ಕುಮಾರ ಪಾಟೀಲ್ (20) ಎಂಬಾತ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ಈತ ಹತ್ತನೇ ತರಗತಿ ಓದುತ್ತಿರುವ ತನ್ನ ಪ್ರೇಯಸಿಗೆ ತಾಳಿ ಕಟ್ಟಿ ನಂತರ ಈ ಕೃತ್ಯವೆಸಗಿದ್ದಾನೆ. ಬಾಲಕಿ ಮತ್ತು ಕುಮಾರ ಪಾಟೀಲ್ ಕೆಲ ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರ ಗಮನಕ್ಕೆ ಬಂದಾಗ ಎಚ್ಚರಿಕೆ ಕೋಟ್ಟಿದ್ದರು .
ತಾನು ಪ್ರೀತಿಸಿದ ಪ್ರೇಯಸಿ ಬೇರೆಯವರ ಪಾಲಾಗುಬಹುದು ಎಂಬ ಭಯದಿಂದ ಕುಮಾರ್, ಆಕೆಯನ್ನು ಶಾಲೆಯಿಂದ ಗ್ರಾಮದ ಹೊರಗೆ ಕರೆದೊಯ್ದು ಅರಿಶಿಣದ ತಾಳಿ ಕಟ್ಟಿದ್ದಾನೆ. ನಂತರ ಆಕೆಗೂ ವಿಷ ಕುಡಿಸಿ, ಈತನು ವಿಷ ಕುಡಿದಿದ್ದಾನೆ. ಹುಡುಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಹುಡುಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
