ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ ; ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌

ಬೆಂಗ​ಳೂರು:

    ಕೈಗಾ​ರಿಕಾ ಪ್ರದೇ​ಶ​ಕ್ಕಾಗಿ ಸ್ವಾಧೀನ ಪಡಿ​ಸಿ​ಕೊಂಡ ಜಮೀ​ನಿನ ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.

   ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀ​ಪದ ಹರಲೂರು ಮುದ್ದೇನಹಳ್ಳಿಯಲ್ಲಿನ ರಕ್ಷಣೆ, ಏರೋಸ್ಪೇಸ್‌, ಹೈಟೆಕ್‌ ಇಂಡಸ್ಟ್ರಿ ಬಡಾ​ವ​ಣೆ​ಗಳ ಕೈಗಾರಿಕಾ ಪ್ರದೇಶಕ್ಕೆ ಜಗ​ದೀಶ್‌ ಶೆಟ್ಟರ್‌ ಶನಿ​ವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ​ದರು.ಈ ವೇಳೆ ಮಾತ​ನಾ​ಡಿ, ರೈತ​ರಿಂದ ಭೂಮಿ​ ಸ್ವಾಧೀ​ನ​ಪ​ಡಿ​ಸಿ​ಕೊಂಡ ನಂತರ ಅವ​ರಿಗೆ ಪರಿ​ಹಾರ ನೀಡು​ವುದು ಸರ್ಕಾರದ ಕರ್ತವ್ಯ. ಆದರೆ ಪರಿ​ಹಾರ ಧನ ಬಿಡು​ಗಡೆ ಮಾಡು​ವಾಗ ಅಧಿ​ಕಾ​ರಿ​ಗಳು ಹಣ ಕೇಳಿದರೆ ದೂರು ನೀಡಿ. ತಕ್ಷ​ಣವೇ ಅವರ ವಿರುದ್ಧ ಕ್ರಮ ಕೈಗೊ​ಳ್ಳು​ತ್ತೇನೆ ಎಂದು ಎಚ್ಚ​ರಿ​ಸಿ​ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap