ಭೀಕರ ರಸ್ತೆ ಅಪಘಾತ : ಪಶ್ಚಿಮ ಬಂಗಾಳ ಮೂಲದ ಆರು ಜನರ ಸಾವು

ಬೆಂಗಳೂರು :

   ಮುಂಜಾನೆ  ವೇಗವಾಗಿ ಸಾಗುತ್ತಿದ್ದ ಅಂಬುಲೆನ್ಸ್​ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಶ್ಚಿಮ ಬಂಗಾಳ ಮೂಲದ ಆರು ಜನರು ಮೃಪಟ್ಟಿದ್ದಾರೆ.

   ಕೋಗಿಲು ಕ್ರಾಸ್ ಅಪಘಾತ ನಡೆದಿದೆ. ಆಂಬುಲೆನ್ಸ್​ಅನ್ನು ಚಾಲಕ ವೇಗವಾಗಿ ಓಡಿಸಿಕೊಂಡು ಬರುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.  ಈ ವೇಳೆ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಆಂಬುಲೆನ್ಸ್​ ಡಿಕ್ಕಿ ಹೊಡೆದಿದೆ.

  ಇದನ್ನು ಕಾರು ಚಾಲಕ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆತನಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಇರಲಿಲ್ಲ. ಆಂಬುಲೆನ್ಸ್​ ಡಿಕ್ಕಿ ಹೊಡೆದ ರಭಸಕ್ಕೆ ಸುಜಯ್, ದೀಪಂಕರ್ ಡೇ (46), ಸಾಗತ್ ಚೌಧರಿ (43), ಸುಜಯ (46), ಜಯಂತಿ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಧೃವಡೇ (14) ಹೆಸರಿನ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕನೂ ಮೃತಪಟ್ಟಿದ್ದಾನೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap