ಜೈಷ್ ಉಗ್ರ ಸಂಘಟನೆಯಿಂದ ದಾಳಿ ಬೆದರಿಕೆ

ನವದೆಹಲಿ: 

  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ​ ಸೇರಿ ದೇಶದ ಅನೇಕ ಮುಖ್ಯಮಂತ್ರಿಗಳಿಗೆ ಪಾಕಿಸ್ತಾನ ಮೂಲದ ಜೈಷ್​-ಇ-ಮೊಹ್ಮದ್​ ಉಗ್ರ ಸಂಘಟನೆ ಜೀವ ಬೆದರಿಕೆವೊಡ್ಡಿದೆ.

ಈ ವಿಚಾರವನ್ನು ಉತ್ತರ ಪ್ರದೇಶ ಪೊಲೀಸರು ಖಚಿತಪಡಿಸಿದ್ದಾರೆ   ಕೆಲ ಪತ್ರಗಳು ಉತ್ತರ ಪ್ರದೇಶ ಪೊಲೀಸರಿಗೆ ಲಭ್ಯವಾಗಿದೆ ಜೈಷ್​-ಇ-ಮೊಹ್ಮದ್​ ಉಗ್ರ ಸಂಘಟನೆ ಇದನ್ನು ಬರೆದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಆರ್​ಎಸ್​ಎಸ್​ ಮುಖ್ಯಮಸ್ಥ ಮೋಹನ್​ ಭಾಗ್ವತ್​ ಮತ್ತು ಯೋಗಿ ಆದಿತ್ಯನಾಥ್  ಅವರಿಗೆ ಜೀವ ಬೆದರಿಕೆವೊಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳ ಹಾಗೂ ಕೆಲ ರೈಲ್ವೆ ನಿಲ್ದಾಣದಲ್ಲಿ ನಾವು ಬಾಂಬ್​ ಸ್ಫೋಟ ಮಾಡುತ್ತೇವೆ,” ಎಂದು ಎಚ್ಚರಿಸಲಾಗಿದೆ. 

 ಕಿಡಿಗೇಡಿಗಳು ಇದನ್ನು ಬರೆದಿರಬಹುದು ಎನ್ನುವ ಶಂಕೆ ಕೂಡ ಮೂಡಿದೆ. ಆದರೆ, ಇತ್ತೀಚೆಗೆ ಶ್ರೀಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟ ಸಂಭವಿಸಿತ್ತು. ಹಾಗಾಗಿ, ಈ ವಿಚಾರವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap