ಹಾಸನ :
ರಾಜಕೀಯ ಮುಖಂಡರು ವಿರೋಧಿಗಳ ಮೇಲೆ ವಾದ-ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಅದರಂತೆ ಹಾಸನದಲ್ಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ, “60, 70 ವರ್ಷದಿಂದ ಆಡಳಿತ ಮಾಡಿದವರು ದೇಶದ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ ಎಂದು ಹೇಳಿದಿರಿ. ನಾವು ಅಧಿಕಾರಿಕ್ಕೆ ಬಂದರೆ ಆ ಹಣವನ್ನೆಲ್ಲಾ ತಂದೆ ದೇಶದ ಎಲ್ಲರ ಖಾತೆಗೆ 10-15 ಲಕ್ಷ ಹಾಕುವುದಾಗಿ ವಾಗ್ದಾನ ನೀಡಿದಿರಿ. ಎಲ್ಲಿ ಸ್ವಾಮಿ ನೀವು ನೀಡಿದ ಭರವಸೆ? ಎಂದು ಪ್ರಶ್ನಿಸಿದ ಅವರು, ಮೋದಿ ಚುನಾವಣೆ ಬಂದಾಗ ಕಪ್ಪು ಹಣ ಎಲ್ಲಿ ಎಂದು ಅವರಿಗೆ ಹೊಡೆದು ಕೇಳಿ,” ಎಂದು ಉದ್ರೇಕಕಾರಿಯಾಗಿ ಭಾಷಣ ಮಾಡಿದ್ದಾರೆ.
“ರೈತರ ಖಾತೆಗೆ ಹತ್ತು ಲಕ್ಷ ಹಣ ಹಾಕುತ್ತೇನೆ ಎಂದು ಮೋದಿ ಮಾಡಿದ್ದ ವಾಗ್ದಾನ ಎಲ್ಲಿ ಹೋಯ್ತು? ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ತರುತ್ತೇನೆ ಎಂದಿದ್ದ ಮೋದಿ ಬಳಿ ಕಪ್ಪುಹಣ ಎಲ್ಲಿ ಎಂದು ಪ್ರಶ್ನಿಸಿ. ಬಿಜೆಪಿಯವರು ಮತ ಕೇಳಲಿಕ್ಕೆ ಬಂದರೆ ‘ಏ ಮುಚ್ಚಯ್ಯ ಎಲ್ಲಯ್ಯ ಸ್ವಿಸ್ ಬ್ಯಾಂಕ್ ಹಣ’ ನೀವು ಪ್ರಶ್ನೆ ಕೇಳಬೇಕು,” ಎಂದು ಕರೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ