ಹಾಸನ:
ಪ್ರಧಾನ ಅಂಚೆಕಚೇರಿಯಲ್ಲಿ ಎರಡು ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಕ್ಯಾಶ್ ಕೌಂಟರ್ನಲ್ಲಿ ಅಂಚೆ ಸಹಾಯಕಿ ಇದ್ದರು ಕೂಡ ಖದೀಮರು ಹಣ ಕಳವು ಮಾಡಿದ್ದಾರೆ.
ಒಟ್ಟು 10 ಮಂದಿ ಕಳ್ಳರು ಅಂಚೆಕಚೇರಿಗೆ ಆಗಮಿಸಿದ್ದರು. ಏನೋ ಕೇಳುವ ನೆಪದಲ್ಲಿ ಮೂವರು ಅಂಚೆ ಸಹಾಯಕಿ ಕುಳಿತಿದ್ದಲ್ಲೇ ಹೋಗಿದ್ದಾರೆ. ಉಳಿದವರೆಲ್ಲ ಕ್ಯಾಶ್ ಕೌಂಟರ್ನ ಎದುರೇ ಮಾತನಾಡಿಸುತ್ತ ನಿಂತಿದ್ದರು. ನಾವೇಲ್ಲ ಪಾಸ್ಬುಕ್ ಎಂಟ್ರಿ ಮಾಡಿಸಲು ಬಂದಿದ್ದಾಗಿ ಹೇಳಿಕೊಂಡಿದ್ದರು. ಹೀಗೆ ಮಾತನಾಡುತ್ತಲೇ ಅಂಚೆ ಸಹಾಯಕಿಯ ಗಮನ ಸೆಳೆದು ಡ್ರಾಯರ್ನಲ್ಲಿದ್ದ 2 ಲಕ್ಷ ರೂಪಾಯಿಯನ್ನು ಕಳವು ಮಾಡಿದ್ದಾರೆ. ಈ ಖದೀಮದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/28post.jpg)