ಅಂಚೆ ಸಹಾಯಕಿಯ ಕಣ್ಣುತಪ್ಪಿಸಿ 2 ಲಕ್ಷ ರೂಪಾಯಿ ಎಗರಿಸಿದ ಖದೀಮರು…

ಹಾಸನ: 

  ಪ್ರಧಾನ ಅಂಚೆಕಚೇರಿಯಲ್ಲಿ ಎರಡು ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಕ್ಯಾಶ್​ ಕೌಂಟರ್​ನಲ್ಲಿ ಅಂಚೆ ಸಹಾಯಕಿ ಇದ್ದರು  ಕೂಡ ಖದೀಮರು ಹಣ ಕಳವು ಮಾಡಿದ್ದಾರೆ.

   ಒಟ್ಟು 10 ಮಂದಿ ಕಳ್ಳರು ಅಂಚೆಕಚೇರಿಗೆ ಆಗಮಿಸಿದ್ದರು. ಏನೋ ಕೇಳುವ  ನೆಪದಲ್ಲಿ ಮೂವರು ಅಂಚೆ ಸಹಾಯಕಿ ಕುಳಿತಿದ್ದಲ್ಲೇ ಹೋಗಿದ್ದಾರೆ. ಉಳಿದವರೆಲ್ಲ ಕ್ಯಾಶ್​ ಕೌಂಟರ್​ನ ಎದುರೇ ಮಾತನಾಡಿಸುತ್ತ ನಿಂತಿದ್ದರು. ನಾವೇಲ್ಲ ಪಾಸ್​ಬುಕ್​ ಎಂಟ್ರಿ ಮಾಡಿಸಲು ಬಂದಿದ್ದಾಗಿ ಹೇಳಿಕೊಂಡಿದ್ದರು. ಹೀಗೆ ಮಾತನಾಡುತ್ತಲೇ ಅಂಚೆ ಸಹಾಯಕಿಯ ಗಮನ ಸೆಳೆದು ಡ್ರಾಯರ್​ನಲ್ಲಿದ್ದ 2 ಲಕ್ಷ ರೂಪಾಯಿಯನ್ನು ಕಳವು ಮಾಡಿದ್ದಾರೆ.  ಈ ಖದೀಮದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap