ಕೊಲಂಬೋ :
ಶ್ರೀಲಂಕಾ ಬಾಂಬ್ ದಾಳಿಗೆ ಕಾರಣವಾಗಿದ್ದ ನ್ಯಾಷನಲ್ ತೊವ್ಹೀದ್ ಜಮಾತ್ (ಎನ್ಟಿಜಿ) ಉಗ್ರ ಸಂಘಟನೆ ಬಳಿಯಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಎಸ್ಐ ಶ್ರೀಲಂಕಾದಲ್ಲಿರುವ ಉಗ್ರ ಸಂಘಟನೆಗೆ ಆರ್ಥಿಕ ಸಹಾಯ ನೀಡುತ್ತಿತ್ತು ಎನ್ನಲಾಗಿದೆ. ಇಸ್ಲಾಮಿಕ್ ಸ್ಟೇಟ್ ಜೊತೆ ಎನ್ಟಿಜಿ ಸಂಬಂಧ ಹೊಂದಿದೆ. ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ನಡೆದ ಕಾರ್ಯಾಚರಣೆ ವೇಳೆ 14 ಕೋಟಿ ರೂ ಹಣ ಹಾಗೂ 700 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅರ್ಧದಷ್ಟು ಹಣ ನಗದು ರೂಪದಲ್ಲಿ ದೊರೆತಿದೆ. ಉಳಿದ ಹಣ ವಿವಿಧ ಬ್ಯಾಂಕ್ನಲ್ಲಿ ಠೇವಣಿ ಮಾಡಲಾಗಿತ್ತು. ಈ ಖಾತೆಗಳನ್ನು ಮುಟ್ಟುಗೋಲು ಹಾಕಲು ನಾವು ಕ್ರಮ ಕೈಗೊಂಡಿದ್ದೇವೆ. ಒಟ್ಟು 54 ಶಂಕಿತರನ್ನು ಬಂಧಿಸಲಾಗಿದೆ,” ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
