ಕಪಿಲಾ ನದಿಯಲ್ಲಿ ತೇಲುತ್ತಿದ್ದ ನವಜಾತ ಶಿಶುವಿನ ಮೃತದೇಹ

ಮೈಸೂರು:

    ಜನಿಸಿದ ಕೆಲ ಗಂಟೆಗಳಲ್ಲೇ ಮಗುವನ್ನು ನದಿಗೆ ಎಸೆದಿರುವ  ಮನಕಲುಕುವ ಘಡನೆ ಮೈಸೂರುನಲ್ಲಿ ನಡೆದಿದೆ. ಮೈಸೂರಿನ ಕಪಿಲಾ ನದಿಯಲ್ಲಿ ಹಸುಗೂಸಿನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

   ನವಜಾತ ಶಿಶುವನ್ನು ನದಿಗೆ ಬಿಸಾಡಿದ ಪಾಪಿ ತಾಯಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯ ಬಳಿ ಕಪಿಲಾ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.ಜನಿಸಿದ ಕೆಲ ಗಂಟೆಗಳಲ್ಲೇ ಮಗುವನ್ನು ನದಿಗೆ ಎಸೆಯಲಾಗಿದೆ ಎನ್ನಲಾಗುತ್ತಿದೆ. ಕಪಿಲಾ ನದಿಯಲ್ಲಿ ತೇಲುತ್ತಿರುವ ಎಳೆ ಹಸುಗೂಸಿನ ಮೃತದೇಹವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಘಡನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap