ಹರಿಕಥಾ ವಿದ್ವಾನ್‌ ಶೋಭಾ ನಾಯ್ಡು ನಿಧನ

ಬೆಂಗಳೂರು : 

     ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಪುತ್ರಿ ಶೋಭಾ ನಾಯ್ಡು ವಿಧಿವಶರಾಗಿದ್ದಾರೆ. ತಂದೆಯ ವಿರೋಧದ ನಡುವೆಯೂ ಹರಿಕಥೆಗೆ ಕಟ್ಟುಬಿದ್ದಿದ್ದ ಶೋಭಾ ನಾಯ್ಡು ಮೂರು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಭಾನುವಾರ ಶೋಭಾ ನಾಯ್ಡು ವಿಧಿವಶರಾಗಿದ್ದು, ಹಲವು ತಿಂಗಳಿಂದ ಕಿಡ್ನಿ ಸಮಸ್ಯಯಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ನಡೆಸಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕುಟುಂಬ ಸದಸ್ಯರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶೋಭಾ ನಾಯ್ಡು ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮೈಸೂರಿನಲ್ಲಿ ಜನಿಸಿದ್ದ ಆರ್. ಗುರುರಾಜುಲು ನಾಯ್ಡು ತಂದೆ ರಾಮಸ್ವಾಮಿ ನಾಯ್ಡು ತಂದೆಯ ಮಾರ್ಗದರ್ಶನದಲ್ಲಿ ಹರಿಕಥಾ ಕಲೆಯನ್ನು ರೂಢಿಸಿಕೊಂಡು ಮೈಸೂರಿನ ಪ್ರಮುಖ ಹರಿಕಥಾ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap