ಮೈಸೂರು:
ಪಡಿತರ ಅಕ್ಕಿಗಾಗಿ ಥಂಬ್ ಇಂಪ್ರೆಷನ್ ಕೊಡಲು ತೆರಳುತ್ತಿರುವಾಗ ಅಪಘಾತವೊಂದರಲ್ಲಿ ತಂದೆ-ಮಗನ ಪ್ರಾಣಬಿಟ್ಟಿರುವ ಘಟನೆ ಮೈಸೂರಿನ ಕೋಟೆಹುಂಡಿ ಸರ್ಕಲ್ನಲ್ಲಿ ನಡೆದಿದೆ.
ಬೆಳಗ್ಗೆ ರೇಷನ್ ಅಕ್ಕಿಗಾಗಿ ಥಂಬ್ ಇಂಪ್ರೆಷನ್ ಕೊಡಲು ಜಿ.ಪಿ ನಗರದಲ್ಲಿ ವಾಸವಿದ್ದ ಪ್ರಕಾಶ್ (50) ತಮ್ಮ ಮಗ ಸುರೇಶ್ (23) ಜೊತೆ ಕಟ್ಟೆಹುಣಸೂರಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಸರ್ಕಾರಿ ಬಸ್ ಮತ್ತು ಪ್ರಕಾಶ್ ತೆರಳುತ್ತಿದ್ದ ಸ್ಕೂಟರ್ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಇನ್ನು ಅಪಘಾತದಲ್ಲಿ ಪ್ರಕಾಶ್ ಮತ್ತು ಆತನ ಮಗ ಸುರೇಶ್ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಈ ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಹಿಸಿದ್ದಾರೆ. ಈ ಘಟನೆ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/road-accident-1527968091397.jpg)