ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ತಂದೆ-ಮಗನ ಸಾವು!

ಮೈಸೂರು: 

   ಪಡಿತರ ಅಕ್ಕಿಗಾಗಿ ಥಂಬ್​ ಇಂಪ್ರೆಷನ್​ ಕೊಡಲು ತೆರಳುತ್ತಿರುವಾಗ  ಅಪಘಾತವೊಂದರಲ್ಲಿ ತಂದೆ-ಮಗನ ಪ್ರಾಣಬಿಟ್ಟಿರುವ ಘಟನೆ ಮೈಸೂರಿನ ಕೋಟೆಹುಂಡಿ ಸರ್ಕಲ್​ನಲ್ಲಿ ನಡೆದಿದೆ.

      ಬೆಳಗ್ಗೆ ರೇಷನ್​ ಅಕ್ಕಿಗಾಗಿ ಥಂಬ್​ ಇಂಪ್ರೆಷನ್​ ಕೊಡಲು ಜಿ.ಪಿ ನಗರದಲ್ಲಿ ವಾಸವಿದ್ದ ಪ್ರಕಾಶ್​ (50) ತಮ್ಮ ಮಗ ಸುರೇಶ್​ (23) ಜೊತೆ ಕಟ್ಟೆಹುಣಸೂರಿಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಸರ್ಕಾರಿ ಬಸ್​ ಮತ್ತು ಪ್ರಕಾಶ್​ ತೆರಳುತ್ತಿದ್ದ ಸ್ಕೂಟರ್​ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

  ಇನ್ನು ಅಪಘಾತದಲ್ಲಿ ಪ್ರಕಾಶ್​ ಮತ್ತು ಆತನ ಮಗ ಸುರೇಶ್​ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಈ ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಹಿಸಿದ್ದಾರೆ.  ಈ ಘಟನೆ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap