ಕೊಲಂಬೋ, :
ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಇದುವರೆಗೂ 290 ಮಂದಿ ಜೀವಬಿಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಭಾರತದಿಂದ ಹೋದವರ 7 ಜನರಲ್ಲಿ 2 ಮೃತಪಟ್ಟಿರುವ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ಇನ್ನುಳಿದವರ ಬಗ್ಗೆ ಮಾಹಿತಿಯೇ ಇಲ್ಲ. ಹಾಗೆಯೇ ವಿವಿಧ ದೇಶಗಳಿಂದ ಶ್ರೀಲಂಕಾಕ್ಕೆ ಪ್ರವಾಸ ಇನ್ನಿತರೆ ಕೆಲಸದ ಮೇಲೆ ಬಂದವರದ್ದೂ ಇದೆ ಕಥೆ.
ಜನತೆಗೆ ಭಾನುವಾರ ಕರಾಳ ದಿನವಾಗಿದೆ. ಕೊಲೊಂಬೋದ ಮೂರು ಚರ್ಚ್ ಹಾಗೂ ಐಷಾರಾಮಿ ಹೊಟೇಲ್ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ 290ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಈವರೆಗೆ 24 ಜನರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ಕೊಲೊಂಬೋ ಮುಖ್ಯ ವಿಮಾನ ನಿಲ್ದಾಣದ ಬಳಿ ಸ್ಪೋಟಿಸಲು ಇಟ್ಟಿದ್ದ 9ನೇ ಬಾಂಬ್ರ ಅನ್ನು ರಕ್ಷಣಾ ಅಧಿಕಾರಿಗಳು ನಿಷ್ಕ್ರಿಯಗೊಳಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಭಾನುವಾರ ರಾತ್ರಿ ಈ ಬಾಂಬ್ ಪತ್ತೆಯಾಗಿದ್ದ ಸುಧಾರಿತ ಪೈಪ್ ಬಾಂಬ್ ಅನ್ನು ವಾಯು ಸೇನಾ ಅಧಿಕಾರಿಗಳು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಇದು ನಾಡಾ ಬಾಂಬ್ ಎಂದು ಎಎಫ್ಪಿ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/3_Screen-Shot-2019-04-21-at-190341.jpg)