ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದ ಸಮೀಪ ಬಂಡೆಯ ಮೇಲಿಂದ ಗಂಡಾನೆಯೊಂದು ಕೆಳಗೆ ಬಿದ್ದು ಮೃತಪಟ್ಟಿದೆ.
ಸುಮಾರು 40 ರಿಂದ 50 ಅಡಿ ಎತ್ತರದ ಬಂಡೆ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಆನೆ ಬಿದ್ದಿದೆ. ವನ್ಯ ಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆಯೇ ಈ ಅವಘಡ ಜರುಗಿದೆ.
ಬಂಡೆ ಮೇಲಿಂದ ಬಿದ್ದ ನಂತರ ತುಂಬಾ ಸುಸ್ತಾಗಿ ಕೆಲ ಕ್ಷಣಗಳ ಕಾಲ ಸ್ಥಳದಲ್ಲಿಯೇ ನಿಂತಿತು. ಬಳಿಕ ಸುಧಾರಿಸಿಕೊಳ್ಳಲು ಆಗದೇ ಪ್ರಾಣಬಿಟ್ಟಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/r-kn-ckm-01-annedeath-av-7202347_04072019104828_0407f_1562217508_647.jpg)