ಹಾಸನ ಜೆಡಿಎಸ್​ ಭದ್ರಕೋಟೆಯಲ್ಲ, ಬಿಜೆಪಿ ಭದ್ರಕೋಟೆ – ಬಿ.ಎಸ್​.ವೈ

ಹಾಸನ :

  ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ಎ.ಮಂಜು ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಜೊತೆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ಹರಿದುಬಂದಿರುವ ಬೃಹತ್​ ಜನಸಾಗರವೇ ಕಂಡು ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.

   ರಾಜ್ಯದಲ್ಲಿ ಹಾಸನ ತುಮಕೂರು ಸೇರಿ 22 ಸೀಟು ಗೆಲ್ಲುವುದು ನಿಶ್ಚಿತ. ಕುಟುಂಬ ರಾಜಕಾರಣ ನೋಡಿ ಜನರು ಬೇಸತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಇಷ್ಟೊಂದು ಜನ ಸೇರಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು ಹಾಸನ ಜೆಡಿಎಸ್​ ಭದ್ರಕೋಟೆಯಲ್ಲ, ಬಿಜೆಪಿ ಭದ್ರಕೋಟೆಯಾಗಿದೆ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಇಲ್ಲಿ ಬಿಜೆಪಿ ಗೆಲ್ಲುವುದೂ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link