ನಟಿ ರಾಧಿಕಾ ಕುಮಾರಸ್ವಾಮಿ ಕಾಶಿಯಾತ್ರೆ ಮಾಡುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ. ಈಗ ಆ ಸುದ್ಧಿ ನಿಜ ಎಂದು ತಿಳಿದುಬಂದಿದೆ.
ಅಂದಹಾಗೆ ಅವರು ಕಾಶಿಗೆ ತೆರಳಿರುವುದು ‘ಭೈರಾದೇವಿ’ ಎಂಬ ಚಿತ್ರದ ಚಿತ್ರೀಕರಣಕ್ಕಾಗಿ. ಭೈರಾದೇವಿ ಇರುವುದು ಕಾಶಿಯಲ್ಲಿ. ಹಾಗಾಗಿ ಅಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ ಶ್ರೀಜೈ.
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅಂದರೆ, ಅವರು ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಈಗಾಗಲೇ ರಮೇಶ್ ಅರವಿಂದ್ ನಟನೆಯ ದೃಶ್ಯಗಳನ್ನು ಕಾಶಿಯಲ್ಲಿ ಸೆರೆ ಹಿಡಿದಿದ್ದಾರಂತೆ ನಿರ್ದೇಶಕರು. ಭೈರಾದೇವಿ ಹುಡುಕಿಕೊಂಡು ಅವರು ಅಲ್ಲಿಗೆ ಹೊರಡುತ್ತಾರಂತೆ.
