ಮಹಾರಾಷ್ಟ್ರ :
ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ, ಮಾಲಕ ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಿಪಬ್ಲಿಕ್ ಟಿವಿಯಿಂದ ಬಾಕಿ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ 2018 ರಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಅನ್ವಯ್ ನಾಯಕ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ಆಗ್ರಹಿಸಿ ಅನ್ವಯ್ ನಾಯ್ಕ್ ಅವರ ಪುತ್ರಿ ಅದ್ನ್ಯಾ ನಾಯ್ಕ್ ಹೊಸದಾಗಿ ನೀಡಿದ ದೂರನ್ನು ಆಧರಿಸಿ ಈ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮರು ತನಿಖೆಗೆ ಆದೇಶ ನೀಡಿದ್ದರು. ದೂರಿನಲ್ಲಿ ಅವರು, ಬಾಕಿ ಪಾವತಿ ವಸೂಲಿ ಮಾಡಿಕೊಡಲು ನೆರವಾಗುವಂತೆ ಅಲಿಬಾಗ್ ಪೊಲೀಸರಿಗೆ ದೂರು ನೀಡಿದರೂ ಅವರು ಗೋಸ್ವಾಮಿ ಚಾನೆಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಇದೇ ಕಾರಣಕ್ಕೆ ತನ್ನ ತಂದೆ ಮತ್ತು ಅಜ್ಜಿ 2018ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಆರೋಪಿಸಿದ್ದರು.
#WATCH Republic TV Editor Arnab Goswami detained and taken in a police van by Mumbai Police, earlier today pic.twitter.com/ytYAnpauG0
— ANI (@ANI) November 4, 2020
ಈ ಘಟನೆ ಸಂಬಂಧ ಅಲಿಬಾಗ್ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 2020ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು.
ಇಂದು ಬೆಳಗ್ಗೆಯೇ ಗೋಸ್ವಾಮಿ ನಿವಾಸಕ್ಕೆ ತೆರಳಿದ್ದ ಆಲಿಬಾಗ್ ಪೊಲೀಸರ ತಂಡ, ಅರ್ನಬ್ ಗೋಸ್ವಾಮಿ ಅವರನ್ನು ತಳ್ಳಿಕೊಂಡು ಪೊಲೀಸ್ ವ್ಯಾನ್ಗೆ ಏರಿಸುತ್ತಿದ್ದ ದೃಶ್ಯ ಕಂಡಬಂದಿತ್ತು.
Mumbai Police enter Republic TV Editor Arnab Goswami’s residence and attempt to detain him. Arnab Goswami says he has been physically assaulted by Mumbai Police
(file pic) pic.twitter.com/0h1fzaQsnA— ANI (@ANI) November 4, 2020
ವಶಕ್ಕೆ ಪಡೆಯಲು ಮುಂಬೈನಲ್ಲಿರುವ ನಿವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಪೊಲೀಸರು ತಮ್ಮ ಹಾಗೂ ಕುಟುಂಬಸ್ಥರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Arnab-goswamy.gif)