ಕೊರೋನಾ ಕಾರಣ ಮೊಹರಂ ಮೆರವಣಿಗೆ ನಿರಾಕರಿಸಿದ ಸುಪ್ರೀಂ!!

ನವದೆಹಲಿ :

      ಮೊಹರಂ ಮೆರವಣಿಗೆಗಳನ್ನ ನಡೆಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

      ದೇಶಾದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನ್ಕೆಕ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಈವರೆಗೂ ಅವಕಾಶ ನೀಡಲಾಗಿಲ್ಲ. ಅದರಂತೆ ಮುಸ್ಲಿಂ ಸಮುದಾಯದ ಮೊಹರಂ ಹಬ್ಬದ ದಿನದಂದು ಮೆರವಣಿಗೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡಲಾಗಿತ್ತು.

      ಆದರೆ, ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.‌ಎ. ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ತಿರಸ್ಕರಿಸಿದೆ. 

     ‘ಒಂದು ವೇಳೆ ನಾವು ಮೆರವಣಿಗೆಗೆ ಅನುಮತಿ ನೀಡಿದರೆ, ಅವ್ಯವಸ್ಥೆ ಉಂಟಾಗುತ್ತದೆ ಮತ್ತು ಕೋವಿಡ್ ಅನ್ನು ಹರಡಲು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಲಾಗುತ್ತದೆ. ನಮಗೆ ಅದು ಬೇಡ,’ ಎಂದು ಸಿಜೆಐ ಎಸ್​.ಎ. ಬೊಬ್ಡೆ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap