ರಫೇಲ್ ಡೀಲ್ : ಮೋದಿಯನ್ನು ಸಮರ್ಥಿಸಿಕೊಂಡ ಶರದ್ ಪವಾರ್

 ಮುಂಬೈ:

       ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮೋದಿ ಅವರನ್ನು ಅನುಮಾನಿಸುವುದು ಸರಿಯಲ್ಲ, ನನಗೆ ಪ್ರಧಾನಿಗಳ ಮೇಲೆ ಅಪನಂಬಿಕೆ ಇಲ್ಲ ಎಂದು ಎನ್ ಸಿಪಿ(ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಾರ್ಟಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

      ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಸರಕಾರದ ವಿರುದ್ಧ ಮುಗಿ ಬೀಳುತ್ತಿರುವಾಗ ಪವಾರ್‌ ಅವರು ಪ್ರಧಾನಿ ಮೋದಿಯ ನೆರವಿಗೆ ಧಾವಿಸಿದ್ದಾರೆ.

      ‘ತಮ್ಮದೇ ಪಕ್ಷದೊಂದಿಗೆ(ಕಾಂಗ್ರೆಸ್) ಮೈತ್ರಿ ಮಾಡಿಕೊಂಡ ಎನ್ ಸಿಪಿ ಮುಖಂಡರ ಹೇಳುವ ಮಾತನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಮ್ಮೆ ಆಲಿಸಿಕೊಳ್ಳಬೇಕು. ಎಲ್ಲ ಪಕ್ಷ ರಾಜಕೀಯಕ್ಕಿಂತ ರಾಷ್ಟ್ರೀಯ ಹಿತಾಸಕ್ತಿ ದೊಡ್ಡದು’ ಎಂದು ಶರದ್ ಪವಾರ್ ಹೇಳಿದ್ದಾರೆ.

      ಮರಾಠಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಪವಾರ್, ರಫೇಲ್ ಫೈಟರ್ ಜೆಟ್ ಒಪ್ಪಮದಕ್ಕೆ ಸಂಬಂಧಿಸಿದಂತೆ ಮಾಹಿತಿ ಬಿಡುಗಡೆ ಮಾಡಲು ವಿಪಕ್ಷಗಳು ಒತ್ತಾಯಿಸುತ್ತಿರುವುದನ್ನು ಅವರು ಖಂಡಿಸಿದ್ದರು. ‘ರಾಷ್ಟ್ರದ ಹಿತಾಸಕ್ತಿ ಎಲ್ಲ ಪಕ್ಷ ರಾಜಕೀಯಕ್ಕಿಂತ ದೊಡ್ಡದು. ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾವುದೇ ಅನುಮಾನವಿಲ್ಲ’ ಎಂದು ಪವಾರ್ ಸ್ಪಷ್ಟವಾಗಿ ಹೇಳಿದ್ದರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap