ಹೊಸದಿಲ್ಲಿ :
ಬಹುಕೋಟಿ ಮೇವು ಹಗರದಣದಲ್ಲಿ ತಪ್ಪಿತಸ್ಥರಾಗಿ ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರೀ ದೊಡ್ಡ ನಿರಾಶೆ ಎನ್ನಲಾಗಿದ್ದು, ಬಹುಕೋಟಿ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಅವರಿಗೆ ಒಟ್ಟು 20.5 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿತ್ತು.
ಲಾಲು ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಿರೋಧಿಸಿ ಸಿಬಿಐ ನಿನ್ನೆ ಮಂಗಳವಾರ ಪ್ರತಿ-ಅಫಿದಾವಿತ್ ಸಲ್ಲಿಸಿದ್ದು, ಲಾಲು ಅವರು ಕಳೆದ ಎಂಟು ತಿಂಗಳಿಂದಲೂ ಆಸ್ಪತ್ರೆ ವಾರ್ಡಿನಲ್ಲಿ ಇದ್ದಾರೆ; ಆದಾಗ್ಯೂ ಅವರು ಅಲ್ಲಿದ್ದುಕೊಂಡೇ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಕೂಡ ಸಿಬಿಐ ತನ್ನ ಅಫಿದಾವಿತ್ನಲ್ಲಿ ಹೇಳಿದೆ.
ಲಾಲು ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಜಾಮೀನು ಕೋರಿರುವುದು ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸ್ಪಷ್ಟವಿರುವುದರಿಂದ ಅವರ ಅರ್ಜಿಯನ್ನು ಮನ್ನಿಸಬಾರದು ಎಂದು ಸಿಬಿಐ ತನ್ನ ಪ್ರತಿ-ಅಫಿದಾವಿತ್ ನಲ್ಲಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/lalu_650x400_41515413220.gif)