ದೆಹಲಿ :
ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಸ್ವಾಗತಿಸಿದ್ದು, 30 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ” ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ತೀರ್ಪನ್ನುಸುಪ್ರೀಂ ಕೋರ್ಟ್ ನೀಡಿದ್ದು , ನಾಳೆ ಸಂಜೆ 5 ಗಂಟೆ ಒಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂ ಫಡ್ನವೀಸ್ಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ವಿಪಕ್ಷ ನಾಯಕರು ಸ್ವಾಗತಿಸಿದ್ದು, ನಾವು ಖಂಡಿತವಾಗಿಯೂ ಬಹುಮತ ಸಾಭೀತು ಪಡಿಸಿ ಬಿಜೆಪಿ ಎದುರು ಗೆಲ್ಲುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಸ್ವಾಗತಿಸಿದ್ದಾರೆ. ‘ಸತ್ಯ ಗೆದ್ದಿದೆ. ಕೋರ್ಟ್ ವಿಶ್ವಾಸಮತ ಯಾಚನೆಗೆ 30 ಗಂಟೆ ಕಾಲಾವಕಾಶ ನೀಡಿದೆ, ಆದರೆ ನಮ್ಮ ಬಹುಮತವನ್ನು ಕೇವಲ 30 ನಿಮಿಷದಲ್ಲಿ ಸಾಬೀತುಪಡಿಸುತ್ತೇವೆ’ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/sanjay-raut1-1532230295-1571883450.gif)