ಮಹಿಳಾ ತಹಶೀಲ್ದಾರ್ ಗೆ ಬೆಂಕಿ ಹಚ್ಚಿ ಸಜೀವ ದಹನ!!!

ತೆಲಂಗಾಣ :

     ಮಹಿಳಾ ತಹಶೀಲ್ದಾರ್​ ಒಬ್ಬರ ಮೇಲೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಿರುವಂತಹ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ನಲ್ಲಿ ನಡೆದಿದೆ.

      ವಿಜಯ ರೆಡ್ಡಿ ಹತ್ಯೆಯಾದ ತಹಶೀಲ್ದಾರ್. ನವೆಂಬರ್ 4 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದ್ದು,  ಸುರೇಶ್ ಎನ್ನುವ ಆರೋಪಿ ಈ ಕುಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

     ಇಂದು ಮಧ್ಯಾಹ್ನ ಅಬ್ದುಲ್ಲಾಪುರ್ಮೆಟ್‌ನಲ್ಲಿರುವ ವಿಜಯ ರೆಡ್ಡಿ ಅವರ ಕೋಣೆಗೆ ಪ್ರವೇಶಿಸಿದ ಸುರೇಶ್‌ಗೆ ಮೃತ ವಿಜಯ ರೆಡ್ಡಿ, ಸ್ವಲ್ಪ ಕೆಲಸವಿದೆ ಎಂದು ಹೇಳಿದ್ದಾಳೆ. ವ್ಯಕ್ತಿಯು ಪಾಸ್ ಪುಸ್ತಕದೊಂದಿಗೆ ಕಚೇರಿಯಲ್ಲಿ ಅರ್ಧ ಘಂಟೆಯವರೆಗೆ ತನಕ ಕಾಯುತ್ತ ಕುಳಿತುಕೊಂಡಿದ್ದಾನೆ. ಆದರೆ ಕೊನೆಗೆ ಸುರೇಶ್ ವಿಜಯ ರೆಡ್ಡಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

      ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ವಿಜಯ ರೆಡ್ಡಿ ಅವರ ಶವವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ನಂತರ ಆರೋಪಿ ಸುರೇಶ್‌ ಅವರನ್ನು ಬಂಧಿಸಲಾಗಿದೆ.

      ಘಟನೆಯಲ್ಲಿ ತಹಶೀಲ್ದಾರ್ ರಕ್ಷಣೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದಲ್ಲದೇ ವಿಜಯ ರೆಡ್ಡಿ ತಹಶೀಲ್ದಾರ್​ ರಕ್ಷಣೆ ಮಾಡಲು ಹೋದ ಇಬ್ಬರು ಸಿಬ್ಬಂಧಿಗಳೂ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap