ಕರ್ನಾಟಕದ ಯೋಧ ಸೇರಿ ಮೂವರು ಹುತಾತ್ಮ!!

ಬಿಜಾಪುರ್‌:

     ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಕಲಬುರಗಿಯ ಯೋಧ ಸೇರಿ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

      ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ್‌ ಪಾಟೀಲ (55) ಮೃತ ರಾಜ್ಯದ ಯೋಧ.  ಉತ್ತರಪ್ರದೇಶದ ಅಲಿಗಡದ ಸಬ್‌ಇನ್‌ಸ್ಪೆಕ್ಟರ್‌ ಮದನ್‌ಪಾಲ್ ಸಿಂಗ್‌(52) ಹಾಗೂ ಕೇರಳದ ಇಡುಕ್ಕಿಯವರಾದ ಹೆಡ್‌ ಕಾನ್‌ಸ್ಟೇಬಲ್ ಸಾಜು ಒ.ಪಿ.(47) ಹುತಾತ್ಮರಾಗಿದ್ದಾರೆ.

      ಛತ್ತೀಸ್‌ಗಡದ ಬಿಜಾಪುರ್‌ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಕಾರ್ಯಾಚರಣೆ ವೇಳೆ, ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ತಂಡವು ಮೋಟಾರು ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ, ಏಕಾಏಕಿ ನಕ್ಸಲರು ಅವರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆ ಕೆಲಹೊತ್ತು ಗುಂಡಿನ ಚಕಮಕಿ ನಡೆದಿದೆ. 

      ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ನಕ್ಸಲರು ಭದ್ರತಾ ಪಡೆಗಳ ಬಳಿಯಿದ್ದ ಒಂದು ಎಕೆ-47 ರೈಫ‌ಲ್, ಅದರಲ್ಲಿದ್ದ 4 ಮ್ಯಾಗಜಿನ್‌ಗಳು, ಒಂದು ಬುಲೆಟ್ಪ್ರೂಫ್ ಜಾಕೆಟ್ ಮತ್ತು ವೈರ್‌ಲೆಸ್‌ ಸೆಟ್ ಅನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap