ಅಪಘಾತ : ಪಂಡಾರಾಪುರಕ್ಕೆ ಹೋಗುತ್ತಿದ್ದ 5 ಮಂದಿ ಭಕ್ತರ ಸಾವು!!

ಬೆಳಗಾವಿ:

       ಟೆಂಪೋ ಮತ್ತು ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಐವರು ಭಕ್ತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಬಳಿ ನಡೆದಿದೆ.

      ಮೃತರನ್ನು ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಕೆ.ವಿ. ಕಣಬರಕರ, ಮಹಾದೇವ ಎಂ.ಕಣಬರಕರ, ಬಾಳು ಅಂಬೇವಾಡಿಕರ, ಅರುಣ ಮುತಗೇಕರ ಹಾಗೂ ಹಂಗರಗಾ ಗ್ರಾಮದ ಎ.ಪಾಟೀಲ ಎಂದು ಗುರುತಿಸಲಾಗಿದೆ.

      ಏಕಾದಶಿಯ ಅಂಗವಾಗಿ ಪಂಡರಾಪುರದ ವಿಠಲನ ದರ್ಶನಕ್ಕಾಗಿ ಮಂಡೋಳಿ ಗ್ರಾಮದಿಂದ ಗುರುವಾರ ರಾತ್ರಿ ಟೆಂಪೋದಲ್ಲಿ ಪಂಢರಪುರಕ್ಕೆ ತೆರಳಿದ್ದರು. ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎದುರಿನಿಂದ ಹೋಗುತ್ತಿದ್ದ ಟ್ರಾಕ್ಟರ್​ಗೆ ಭಕ್ತರಿದ್ದ ಟೆಂಪೋ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದವರ ಪೈಕಿ ಐವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಇನ್ನುಳಿದ ಮಂದಿ ಪ್ರಯಾಣಿಕರು ಗಾಯಗೊಂಡ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಈ ಸಂಬಂಧ ಪ್ರಕರಣ ದಾಖಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap