ತುಮಕೂರು : ಪತ್ರಿಕೆಯ ಸುದ್ಧಿ ನೋಡಿ ಕಸವಿಲೇವಾರಿ ಮಾಡಿದ ಪಾಲಿಕೆ!

 ತುಮಕೂರು :

 

    ನಗರದ ಎಸ್.ಐ.ಟಿ.ಕಾಲೇಜು ಬ್ಯಾಕ್ ಗೇಟ್ ನ 24 ನೇ ಕ್ರಾಸ್ ಹಾಗು ಸುತ್ತಮುತ್ತಲ ಪ್ರದೇಶದಲ್ಲಿ ಕಸದ ರಾಶಿ ಹೆಚ್ಚಾಗಿತ್ತು. ಸಂಬಂಧಪಟ್ಟವರು ಕಸ ವಿಲೇವಾರಿ ಮಾಡುವಂತೆ ಅಲ್ಲಿನ ನಾಗರೀಕರು ಒತ್ತಾಯಿಸುತ್ತಿದ್ದರು.

 

    ಈ ಕುರಿತು ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಸುದ್ಧಿ ಪ್ರಕಟವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ನಗರಪಾಲಿಕೆ ಅಲ್ಲಿನ ಕಸವನ್ನು  ವಿಲೇವಾರಿ ಮಾಡಿದೆ.

 

    ಇಂದು ಬೆಳಗ್ಗೆಯೇ ಸಂಬಂಧಪಟ್ಟವರು ಕಸ ತೆಗೆದು ಕತ೯ವ್ಯ ಪ್ರಜ್ಞೆ ತೋರಿದ್ದಾರೆ. ಇಷ್ಟು ಶೀಘ್ರ ಫಲಿತಾಂಶ ಕಂಡಿದ್ದು ನನ್ನ ಇಡೀ ಜೀವಮಾನದಲ್ಲಿಯೇ ಪ್ರಥಮ. ಪ್ರಜಾಪ್ರಗತಿ ಪತ್ರಿಕೆ ನೋಡಿದ ಕೂಡಲೇ ಬಂದು ಈ ಕೆಲಸ ನಿವ೯ಹಿಸಿದವರಿಗೆ ಹಾಗೂ ಪ್ರಜಾಪ್ರಗತಿ ಪತ್ರಿಕೆಗೆ ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾ ಕುಮಾರಿ ಧನ್ಯವಾದ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap