ತಿರುವನಂತಪುರ:
ಭಾರೀ ಗಾತ್ರದ ಹೆಬ್ಬಾವೊಂದು ಕಾರ್ಮಿಕರೊಬ್ಬರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡ ಭಯಾನಕ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಯ್ಯರ್ ಜಲಾಶಯದ ಬಳಿಯ ಸ್ಥಳೀಯ ಕಾಲೇಜೊಂದರ ಬಳಿ ಸ್ವಚ್ಛತಾ ಕಾರ್ಯ ವೇಳೆ 58 ವರ್ಷದ ಕಾರ್ಮಿಕರೊಬ್ಬರ ಕುತ್ತಿಗೆಯನ್ನು ಹೆಬ್ಬಾವೊಂದು ಬಿಗಿಯಾಗಿ ಸುತ್ತಿಕೊಂಡಿದ್ದು, ಅವರ ಉಸಿರು ನಿಂತೇ ಹೋದ ಆಗಿತ್ತು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತವಾರಣ ನಿರ್ಮಾಣವಾಗಿತ್ತು.
#WATCH Kerala: A man was rescued from a python by locals after the snake constricted itself around his neck in Thiruvananthapuram, today. The snake was later handed over to forest officials and released in the forest. pic.twitter.com/uqWm4B6VOT
— ANI (@ANI) October 16, 2019
ಸುಮಾರು 10 ಅಡಿ ಉದ್ದದ ಹೆಬ್ಬಾವು ಹಿಡಿತ ಬಿಗಿಯಾಗಿಸುತ್ತಿದ್ದಂತೆ ಅದೃಷ್ಟವಶಾತ್, ಜತೆಗೆ ಕೆಲಸ ಮಾಡುತ್ತಿದ್ದ ಇತರರಿಗೆ ವಿಷಯ ತಿಳಿದಿದೆ. ಕೂಡಲೇ ಧಾವಿಸಿದ ಇತರ ಕಾರ್ಮಿಕರು ಹೆಬ್ಬಾವಿನ ಹಿಡಿತದಿಂದ ಭುವನಚಂದ್ರನ್ ಅವರನ್ನು ರಕ್ಷಿಸಿದ್ದಾರೆ.
ನಂತರ ಆ ಹಾವನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/Python-snake.gif)