ದೆಹಲಿ :
ತರಕಾರಿ ತರಲು 30 ರೂಪಾಯಿ ಕೇಳಿದ ಪತ್ನಿ ಮೇಲೆ ಕೋಪಗೊಂಡ ಪತಿ ಮೂರು ಬಾರಿ ತಲಾಖ್ ಎಂದು ಮನೆಯಿಂದ ಹೊರದಬ್ಬಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಗ್ರೇಟರ್ ನೋಯ್ಡಾ ಬಳಿಯ ದಾದ್ರಿ ಎಂಬಲ್ಲಿ ವಾಸ ಮಾಡುತ್ತಿದ್ದ ಜೈನಬಿ(30) ಎಂಬ ಮಹಿಳೆ ಈ ಕುರಿತು ಆರೋಪ ಮಾಡುತ್ತಿದ್ದು, ತನ್ನ ಪತಿ ಸಬೀರ್(34) ಮತ್ತು ಆತನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ತಲಾಕ್ ಹೇಳಿದ್ದಲ್ಲದೆ ಸ್ಕ್ರ್ಯೂಡ್ರೈವರ್ನಿಂದ ಕೂಡ ಹಲ್ಲೆ ನಡೆಸಿದ್ದಾನೆ. ತನ್ನ ಮಗಳು ಮದುವೆಯಾದಾಗಿನಿಂದಲೂ ಸಬೀರ್ನೊಂದಿಗೆ ಕಷ್ಟಪಟ್ಟು ಬದುಕುತ್ತಿದ್ದಳು. ಈ ಹಿಂದೆಯೂ ಕೂಡ ಮಗಳು ಜೈನಬ್ ತಲೆಗೆ ಕೋಲಿನಿಂದ ಹೊಡೆದಿದ್ದ. ಹಾಗೇ ಆತನ ಸಂಬಂಧಿಗಳೂ ಕೂಡ ಜೈನಬ್ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಬೀರ್ನನ್ನ ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನ ಮನೆಯವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/Talaq.gif)