ತರಕಾರಿಗೆ ಹಣ ಕೇಳಿದ ಪತ್ನಿಗೆ ತಲಾಕ್​ ಹೇಳಿ ಹೊರದಬ್ಬಿದ ಪತಿ!

ದೆಹಲಿ :

 

     ತರಕಾರಿ ತರಲು 30 ರೂಪಾಯಿ ಕೇಳಿದ ಪತ್ನಿ ಮೇಲೆ ಕೋಪಗೊಂಡ ಪತಿ ಮೂರು ಬಾರಿ ತಲಾಖ್ ಎಂದು ಮನೆಯಿಂದ ಹೊರದಬ್ಬಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.

     ಗ್ರೇಟರ್ ನೋಯ್ಡಾ ಬಳಿಯ ದಾದ್ರಿ ಎಂಬಲ್ಲಿ ವಾಸ ಮಾಡುತ್ತಿದ್ದ ಜೈನಬಿ(30) ಎಂಬ ಮಹಿಳೆ ಈ ಕುರಿತು ಆರೋಪ ಮಾಡುತ್ತಿದ್ದು, ತನ್ನ ಪತಿ ಸಬೀರ್(34) ಮತ್ತು ಆತನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

     ಕ್ಷುಲ್ಲಕ ಕಾರಣಕ್ಕೆ ತಲಾಕ್​ ​ಹೇಳಿದ್ದಲ್ಲದೆ ಸ್ಕ್ರ್ಯೂಡ್ರೈವರ್​ನಿಂದ ಕೂಡ ಹಲ್ಲೆ ನಡೆಸಿದ್ದಾನೆ. ತನ್ನ ಮಗಳು ಮದುವೆಯಾದಾಗಿನಿಂದಲೂ ಸಬೀರ್​ನೊಂದಿಗೆ ಕಷ್ಟಪಟ್ಟು ಬದುಕುತ್ತಿದ್ದಳು. ಈ ಹಿಂದೆಯೂ ಕೂಡ ಮಗಳು ಜೈನಬ್​ ತಲೆಗೆ ಕೋಲಿನಿಂದ ಹೊಡೆದಿದ್ದ. ಹಾಗೇ ಆತನ ಸಂಬಂಧಿಗಳೂ ಕೂಡ ಜೈನಬ್​ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಬೀರ್​ನನ್ನ ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನ ಮನೆಯವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap