ತುಮಕೂರು:
ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಆಚರಣೆ ಅಂಗವಾಗಿ ಕಾವೇರಿ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ, ಸದಾಶಿವನಗರ, ತುಮಕೂರಿನಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಎಸ್. ಎಮ್. ಕನವಳ್ಳಿ, ನಬಾರ್ಡ್ ನ ಡಿಡಿಎಮ್ ಶ್ರೀಮತಿ ಕೀರ್ತಿ ಪ್ರಭಾರವರು ಮತ್ತು ಬ್ಯಾಂಕ್ ಸಹೋದ್ಯೋಗಿಗಳು ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿ ಅವರು ಕಂಡ ಸ್ವಚ್ಛ ಭಾರತ – ಸ್ವಸ್ಥ ಭಾರತ ಕನಸುನ್ನು ನನಸಾಗಿಸೋಣ ಮತ್ತು ಇದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಶ್ರೀ ಎಸ್. ಎಮ್. ಕನವಳ್ಳಿ ಮತ್ತು ಶ್ರೀಮತಿ ಕೀರ್ತಿಪ್ರಭಾರವರು ಮಾತನಾಡಿದರು ಹಾಗೂ ಪ್ರಾದೇಶಿಕ ಕಚೇರಿಯ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಲಾಯಿತು.
![](https://prajapragathi.com/wp-content/uploads/2018/10/21.gif)