ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು…

ವಯನಾಡ್‌:

    ಶಾಲೆ ಕೊಠಡಿಯಲ್ಲಿ ಹಾವು ಕಡಿದು ಶೆಹ್ಲಾ ಶೆರಿನ್‌ ಎಂಬ 10 ವರ್ಷದ ಬಾಲಕಿಯೊ ಸಾವನ್ನಪ್ಪಿದ್ದಾಳೆ ಈ ಘಟನೆ ಕೇರಳದ ವಯನಾಡ್‌ ಜಿಲ್ಲೆಯ ಸುಲ್ತಾನ್‌ ಬತೇರಿಯಲ್ಲಿ ನಡೆದಿದೆ.

   ಹಾವು ಕಡಿದ ತಕ್ಷಣವೇ ಬಾಲಕಿ ಶಿಕ್ಷಕಿಗೆ ಹೇಳಿದ್ದಾಳೆ. ಆದರೆ, ಅದನ್ನು ನಂಬದ ಶಿಕ್ಷಕಿ ಶಿಜಿಲ್‌, ಉಗುರು ತಾಗಿ ಗಾಯವಾಗಿರಬೇಕು ಎಂದು ನಿರ್ಲಕ್ಷ್ಯತೋರಿದ್ದಾಳೆ. ಬಾಲಕಿಯ ಕಾಲು ಊದಿಕೊಂಡು ನೀಲಿ ಆಗಿದ್ದರೂ ಆಸ್ಪತ್ರೆಗೆ ದಾಖಲಿಸುವ ಬದಲು ತರಗತಿಯನ್ನು ಮುಂದುವರಿಸಿದ್ದಾಳೆ. ಅಲ್ಲದೇ ಬಾಲಕಿಯನ್ನು ತರಗತಿಯ ಹೊರಗೆ 45 ನಿಮಿಷಗಳ ನಿಲ್ಲಿಸಿದ್ದಾಳೆ. ಯಾರೂ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಿಲ್ಲ.

  ಕೊನೆಗೆ ಬಾಲಕಿಯ ತಂದೆ ಬಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ  ಬಾಲಕಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ವೇಳೆ ಬಾಲಕಿ ಶೆಹ್ಲಾ ಶೆರಿನ್‌ ಸಾವಿಗೀಡಾಗಿದ್ದಾಳೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆ ಸಂಬಂಧ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap