ಬೆಂಗಳೂರು:
ಬೆಂಗಳೂರು ಮನೆ ಮೇಲೆ ಎಸಿಬಿ ದಾಳಿ ನಡೆಸಿದ ಬೆನ್ನ ಹಿಂದೆಯೇ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅವರಿಗೆ ಅಕ್ಟೋಬರ್ 6 ರಂದು ಸಂಜೆ ಲಘು ಹೃದಯಾಘಾತವಾಗಿದೆ.
ಹೃದಯಾಘಾತಕ್ಕೆ ಒಳಗಾದ ಟಿ.ಆರ್.ಸ್ವಾಮಿ ಅವರನ್ನು ಮಲ್ಲೇಶ್ವರಂ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲೇ ತಪಾಸಣೆ ನಡೆಸಿದ ವೈಧ್ಯರು, ಆಂಜಿಯೋಗ್ರಾಂ ನಡೆಸಲು ಸಿದ್ದರಾಗುತ್ತಿದ್ದರೂ ಕೂಡಾ ಇದಕ್ಕೆ ಒಪ್ಪದ ಟಿ.ಆರ್.ಸ್ವಾಮಿ ಅವರು, ಬೇರೊಂದು ಖಾಸಗಿ ಆಸ್ಪತೆಗೆ ದಾಖಲಾಗಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
