ಕೊರಟಗೆರೆ
ಕಣ್ವ ಇಂಟರ್ನ್ಯಾಷನಲ್ ಶಾಲೆಯ ಐಸಿಎಸ್ ಸಿ ಪಠ್ಯ ಆಧಾರಿತ ಕ್ರಮದ ಶಾಲೆ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಜಮೀನಿನ ವ್ಯಾಜ್ಯ ಒಂದು ಹಂತಕ್ಕೆ ಅಂತ್ಯ ಕಂಡಿದ್ದು, ಹೈಕೋರ್ಟ್ 30 ವರ್ಷಗಳ ಕಾಲ ಶಾಲೆ ನಡೆಯುತ್ತಿರುವ ಸ್ಥಳದಲ್ಲಿಯೇ ಕಣ್ವ ಶಾಲೆ ನಡೆಸಲು ಆದೇಶ ಹೊರ ಬಿದ್ದಿದೆ ಎಂದು ಆಡಳಿತ ವರ್ಗ ಕೋರ್ಟ್ ಆದೇಶ ಪ್ರತಿಯನ್ನು ಪೋಷಕರ ಮುಂದಿಡುವ ಮೂಲಕ ಕಣ್ವ ಶಾಲೆ ಮುಚ್ಚಳಿದೆ ಎಂಬುವ ಪೋಷಕರ ಹಾಗೂ ವಿದ್ಯಾರ್ಥಿಗಳ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇನಹಳ್ಳಿ ಸರ್ವೆ ನಂಬರ್ 5/6 ರಲ್ಲಿ 2 ಎಕರೆ 27 ಕುಂಟೆ ಜಮೀನಲ್ಲಿ ಶಾಲೆ ತೆರೆಯಲಾಗಿದ್ದು, ಇಡೀ ತಾಲೂಕಿನಲ್ಲಿ ಏಕೈಕ ಐಸಿಎಸ್ಸಿ ಪಠ್ಯ ಆಧಾರಿತ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪೋಷಕರ ಮಹತ್ವಕಾಂಕ್ಷಿಯೊಂದಿಗೆ ಇಂಟರ್ನ್ಯಾಷನಲ್ ಶಾಲೆಯಲ್ಲಿ 417 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇತ್ತೀಚಿಗೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೆ ಪಿ ಐ ಡಿ ಎಫ್ ಕಾಯ್ದೆ ಜಮೀನು ಮುಟ್ಗೋಲು ಹಾಕಿಕೊಂಡು ಪ್ರಕರಣ ಶಾಲೆ ಮುಚ್ಚುವ ಆತಂಕದಲ್ಲಿದ್ದ ಪೋಷಕರು ಹಾಗೂ ಶಿಕ್ಷಕರಿಗೆ ಕಣ್ವ ಶಿಕ್ಷಣ ಸಂಸ್ಥೆ ಹೈಕೋರ್ಟ್ ನಲ್ಲಿ 30 ವರ್ಷಗಳ ಕಾಲ ಯಥಾವತ್ ಇರುವ ಸ್ಥಳದಲ್ಲಿಯೇ ಶಾಲೆ ನಡೆಸುವ ಆದೇಶ ಹೊರಡಿಸುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ.
ಕಣ್ವ ಸೌಹಾರ್ದ ಕೋ- ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಹಾಗೂ ಕಣ್ವ ಸಮೂಹ ಸಂಸ್ಥೆಯ ಆರ್ಥಿಕ ವ್ಯವಹಾರದಿಂದ ಸರ್ಕಾರ ಜಿ ನಾಗೇನಹಳ್ಳಿ ಕಣ್ವ ಇಂಟರ್ನ್ಯಾಷನಲ್ ಶಾಲೆಯ ಜಮೀನು, ಕಟ್ಟಡ ಹಾಗೂ ನಿವೇಶನ ಮುಟ್ಟುಗೋಲು ಹಾಕಿಕೊಂಡು ಹರಾಜ್ ಪ್ರಕ್ರಿಯೆಗೆ ಮುಂದಾಗಿರುವ ಪ್ರಕರಣ 417 ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ಸೃಷ್ಟಿಸಿ ಇಡೀ ತಾಲೂಕಿನಲ್ಲಿ ಏಕೈಕ ಐಸಿಎಸ್ ಸಿ ಪಠ್ಯ ಆಧಾರಿತ ಶಾಲೆಯಾದ ಕಾರಣ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡು ಶಾಲೆಯ ವಾತಾವರಣವೇ ಕಲುಷಿತವಾದ ಸಂದರ್ಭದಲ್ಲಿ ಕಣ್ವ ಶಾಲಾ ಸಮೂಹ ಹೈಕೋರ್ಟ್ ನಲ್ಲಿ ಒಂದು ಶಾಶ್ವತ ಪರಿಹಾರ ಹೊದಗಿಸುವಂತಹ ಆದೇಶ ಪ್ರತಿ ಹಿಡಿದು ನಮ್ಮ ಶಾಲೆ ಯಾವುದೇ ಕಾರಣಕ್ಕೂ 30 ವರ್ಷಗಳ ಕಾಲ ಯಾವುದೇ ಕಾನೂನು ತೊಡಕು ಸಂಭವಿಸುವುದಿಲ್ಲ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೈಕೋರ್ಟ್ ಆದೇಶ ಪ್ರತಿ ಮುಂದಿಡುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಆತಂಕವನ್ನು ಹೋಗಲಾಡಿಸಲು ಮುಂದಾಗಿದ್ದಾರೆ.
ಕಣ್ವ ಶಾಲೆಯಲ್ಲಿ ತಲೆದೂರಿದ ಜಮೀನಿನ ವ್ಯಾಜ್ಯ ಸಂಬಂಧಿಸಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಬೇರಡೆ ವರ್ಗಾವಣೆಗೊಳ್ಳಲು ತಾಲೂಕಿನಲ್ಲಿ ಏಕೈಕ ಶಾಲೆ ಐಸಿಎಸ್ ಸಿ ಪಟ್ಟಿ ಆಧಾರಿತ ಶಾಲೆ ಆದಕಾರಣ ಜಿಲ್ಲೆಯ ಇತರೆ ತಾಲೂಕು ಹಾಗೂ ಕೇಂದ್ರ ಸ್ಥಾನಕ್ಕೆ ವರ್ಗಾವಣೆ ಮಾಡಿಕೊಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಬಹುದು ಎಂಬ ಆತಂಕದಲ್ಲಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಕಣ್ವ ಇಂಟರ್ನ್ಯಾಷನಲ್ ಮಾಲೀಕರು ಪೋಷಕರ ಸಭೆ ಕರೆದು 30 ವರ್ಷಗಳ ಕಾಲ ನಮ್ಮ ಶಾಲೆ ಇದ್ದ ಸ್ಥಳದಲ್ಲಿಯೇ ಗುಣಮಟ್ಟ ಶಿಕ್ಷಣ ನೀಡಲಿದೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ನಲ್ಲಿ ನೀಡಲಾದ ಪಡೆಯಜ್ಞ ಪ್ರತಿ ಹಿಡಿದು ಪೋಷಕರು ಆತಂಕ ಪಡದೆ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿ ಎಂದು ಮನವಿ ಮಾಡಿಕೊಂಡರು.
ಕಣ್ವ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ರಜಿತ್ ಪಿ ಗೌಡ ಮಾತನಾಡಿ ಶಾಲೆ ಪ್ರಾರಂಭ ಮುನ್ನವೇ ಸರ್ಕಾರ ಜೊತೆ ಕಣ್ವ ಶಾಲೆ 30 ವರ್ಷಗಳ ಲೀಜ್ ಒಪ್ಪಂದ ಮಾಡಿಕೊಂಡಿದೆ, ಕಣ್ವ ಈಗ ಇರುವ ಶಾಲೆಯ ಜಾಗ ಸರ್ಕಾರದ ಸ್ವತ್ತು ಆಗಿರುವ ಕಾರಣ ಸಂಬಂಧಪಟ್ಟ ಇಲಾಖೆಯೊಂದಿಗೆ ನಾವು ಸಂಪರ್ಕದಲ್ಲಿದ್ದು, ನಾವೇ ಶಾಲೆಗೆ ಜಮೀನನ್ನು ಕೊಂಡುಕೊಳ್ಳುವ ಇಲ್ವೇ, ಗುತ್ತಿಗೆ ಮುಂದುವರಿಸಿಕೊಂಡು ಹೋಗುವಂತ ಅವಕಾಶ ಇರುವುದರಿಂದ ಜೊತೆಗೆ ಹೈಕೋರ್ಟ್ ಯಾವುದೇ ಕಾರಣಕ್ಕೂ ಕಣ್ವ ಶಾಲೆಯನ್ನ ಬೆರಳಿಗೆ ಸ್ಥಳಾಂತರಿಸುವಂತಿಲ್ಲ ಎಂಬ ಆದೇಶ ಹೊರಡಿಸಿರುವುದರಿಂದ ಯಾವುದೇ ಪೋಷಕರಾಗಲಿ ವಿದ್ಯಾರ್ಥಿಗಳಾಗಲಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಮನವರಿಕೆ ಮಾಡಿದ್ದಾರೆ.
ಕಣ್ವ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಮಂಜುಳಾ ಪುರುಷೋತ್ತಮ್ ಮಾತನಾಡಿ ಕಣ್ವ ಇಂಟರ್ನ್ಯಾಷನಲ್ ಶಾಲೆಯನ್ನ ಪ್ರಾರಂಭಿಸುವುದು ಬೆಂಗಳೂರಿನ ಈಸ್ಟ್ -ವೇಸ್ಟ್ ಸಮೂಹ ಸಂಸ್ಥೆ ಸತತ 40 -50 ವರ್ಷಗಳಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಅನುಭವ ನಮಗಿದೆ , ನಮಗೆ ಇಂತಹ 10 ಹಲವು ಅನುಭವಗಳಿವೆ ಕಣ್ವ ಇಂಟರ್ನ್ಯಾಷನಲ್ ಶಾಲೆ, ಕೊರಟಗೆರೆ ತಾಲೂಕಿನ ಇರುವ ಸ್ಥಳದಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಮತ್ತಷ್ಟು ದಿಟ್ಟತನದಲ್ಲಿ ಮುಂದುವರೆಯಲಿದೆ ನಮ್ಮ ಸಂಸ್ಥೆಯನ್ನು ನಂಬಿಕೆ ಇಟ್ಟಿರುವ ಪೋಷಕರಿಗಾಗಲಿ ಹಾಗೂ ವಿದ್ಯಾರ್ಥಿಗಳಿಗಾಗಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಯಾರೊಬ್ಬರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
