ತುಮಕೂರು!! ಪರಿ ಪರಿಯಾಗಿ ಕೈಮುಗಿದ ಮಕ್ಕಳು: ಕೆರೆ ತಂದಿಟ್ಟ ಅವಾಂತರ

ತುಮಕೂರು:

    ಜಿಲ್ಲೆಯಾದ್ಯಂತ ಒಂದು ರಾತ್ರಿ ಸುರಿದ ನಿರಂತರ ಮಳೆಗೆ ಕೆರೆಗಳು ಭರ್ತಿಯಾಗಿ ಸಾಕಷ್ಟು ಹಾನಿಯುಂಟಾಗಿದೆ. ಕೆರೆದ ದಡದಲ್ಲಿರುವ ನಿವಾಸಿಗಳಿಗೆ ಆತಂಕ ಮನೆ ಮಾಡುತ್ತಿದೆ. ಇಂತಹದ್ದೇ ಸನ್ನಿವೇಶ ಜಿಲ್ಲೆಯಲ್ಲಿ ಇದೆ. ಕೆರೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.

   ಹುಳಿಯಾರಿನ ಶಂಕರಾಪುರ ಬಡಾವಣೆ ನಿವಾಸಿಗಳಿಗೆ ಆತಂಕ ಮನೆ ಮಾಡಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದಲ್ಲಿರುವ ಕೆರೆ ಇಂತಹದ್ದೊಂದು ಆತಂಕ ತಂದಿಟ್ಟಿದೆ‌. ಕೆರೆ ದಡದಲ್ಲಿ ಸಣ್ಣ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ಈಗ ಕೆರೆಯ ನೀರಿನ ಭಯ ಕಾಡುತ್ತಿದೆ. ಶಾಲೆಗೂ ಹೋಗಲು ಆಗ್ತಿಲ್ಲ ಎಂದು ಮಕ್ಕಳ ಗೋಳಾಡುತ್ತಿದ್ದಾರೆ‌. ಕುಟುಂಬಗಳನ್ನ ಬೇರೆಡೆ ಸ್ಥಳಾಂತರ ಮಾಡಲು ಮನವಿ ಮಾಡಲಾಗಿದೆ.

Recent Articles

spot_img

Related Stories

Share via
Copy link
Powered by Social Snap