ಕಾಂಗ್ರೆಸ್ ಸೋಲಿನ ಬಳಿಕ ಡಿಕೆಶಿ ರಾಜೀನಾಮೆ‌ ನೀಡಬೇಕಿತ್ತು : ಈಶ್ವರಪ್ಪ

ಬೆಂಗಳೂರು : 

      ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ‌ ನೈತಿಕ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್ ಕೂಡ ರಾಜೀನಾಮೆ ನೀಡಬೇಕಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

      ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದೆ. ಪ್ರಧಾನಿ‌ ಮೋದಿ‌ ರೈತರ ಪರ ಇದ್ದಾರೆ. ರೈತರ ಪರ ಇರೋದಕ್ಕೆ ಹೈದ್ರಾಬಾದ್ ಲ್ಲಿ ಮೊನ್ನೆ ಗೆದ್ದಿರೋದು. ದೇಶದಲ್ಲಿ ಮೋದಿ ಪ್ರಭಾವ ಇದ್ದೇ ಇದೆ. ಕಾಂಗ್ರೆಸ್ ಗೆ ಅಸ್ತಿತ್ವ ಎಲ್ಲಿದೆ?. ಮೊನ್ನೆ ಮೊನ್ನೆ ಮುಕ್ತಾಯ ಆದ ಪರಿಷತ್ ಚುನಾವಣೆ, ಶಿರಾ ಆರ್ ಆರ್ ನಗರ ಚುನಾವಣೆ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಹೈದ್ರಾಬಾದ್ ಕಾಂಗ್ರೆಸ್ ಅಧ್ಯಕ್ಷ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ‌. ಅದೇ ರೀತಿ ಡಿಕೆಶಿ ರಾಜಿನಾಮೆ ನೀಡಬೇಕಿತ್ತು ಎಂದರು.

      ಶಿರಾದಲ್ಲಿ ಕಾಂಗ್ರೆಸ್ ಸೋಲಿಸಿದ್ದು ಡಿಕೆ ಶಿವಕುಮಾರ್. ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಸೋಲಿಸಿದ್ದು ಸಿದ್ದರಾಮಯ್ಯ. ಅವರ ಗುಂಪುಗಾರಿಕೆ ಇಂದ ಸೋತಿದ್ದಾರೆ ಎಂದು ತಿಳಿಸಿದರು.

       ಉಪ ಚುನಾವಣೆಗಳು ಮುಂದಿನ ಎಲೆಕ್ಷನ್ ಗಳಿಗೆ ದಿಕ್ಸೂಚಿ ಎಂದಿದ್ರು. 4 ಎಂಎಲ್ ಸಿ ಸ್ಥಾನಗಳಲ್ಲೂ ಒಂದೂ ಗೆಲ್ಲಲಿಲ್ಲ. ಅವ್ರ ಪ್ರಕಾರವೇ ಇನ್ಮುಂದೆ ಕಾಂಗ್ರೆಸ್ ಗೆಲ್ಲಲ್ಲ ಅಂತಾಯ್ತು. ಹೀಗಾಗಿ ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಡೋದು ಒಳ್ಳೇದು ಎಂದು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap