ಕುಣಿಗಲ್ :
ತೀವ್ರ ಕುತೂಹಲ ಕೆರಳಿಸಿ ಕಾಂಗ್ರೆಸ್ನಲ್ಲೇ ಪೈಪೋಟಿ ಏರ್ಪಟ್ಟಿದ್ದ ಕುಣಿಗಲ್ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಕೆ.ನಾಗೆಂದ್ರ ಹಾಗೂ ಉಪಾಧ್ಯಕ್ಷೆಯಾಗಿ ಮಂಜುಳಾ ರಂಗಪ್ಪ ಆವಿರೋಧವಾಗಿ ಆಯ್ಕೆಯಾದರು.
ಪುರಸಭೆಯ ಒಟ್ಟು 23 ಸದಸ್ಯ ಬಲದಲ್ಲಿ ಕಾಂಗ್ರೇಸ್ 14, ಬಿಜೆಪಿ 4, ಜೆಡಿಎಸ್3 ಹಾಗೂ ಇಬ್ಬರು ಪಕ್ಷೇತರ ಸದಸ್ಯ ಬಲ ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಅವರ ಆದೇಶದಂತೆ ಕಾಂಗ್ರೆಸ್ನಿಂದ ಅಧ್ಯಕ್ಷಸ್ಥಾನಕ್ಕೆ ಎಸ್.ಕೆ.ನಾಗೆಂದ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಂಗಪ್ಪ ನಾಮಪತ್ರ ಸಲ್ಲಿಸಿದರು. ಬಿಜೆಪಿ ಯಿಂದ ಕೋಟೆ ನಾಗಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಶಾಸಕರ ಮನವಿ ಮೇರೆಗೆ ಉಮೇದುವಾರಿಕೆ ಹಿಂಪಡೆದ ಬಿಜೆಪಿ ಸದಸ್ಯ: ಶಾಸಕ ಡಾ.ರಂಗನಾಥ್ ಅವರ ಮನವಿಯ ಮೇರೆಗೆ ಬಿಜೆಪಿ ಸದಸ್ಯರ ಕೋಟೆ ನಾಗಣ್ಣ ನಾಮಪತ್ರ ವಾಪಸ್ ಪಡೆದುಕೊಂಡ ಹಿನ್ನಲ್ಲೆಯಲ್ಲಿ ಕಾಂಗ್ರೆಸ್ನ ಎಸ್.ಕೆ.ನಾಗೇಂದ್ರ ಅಧ್ಯಕ್ಷರಾಗಿ ಹಾಗೂ ಮಜುಳಾ ರಂಗಪ್ಪ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಹೈಕಮಾಂಡ್ ನಿರ್ಧಾರಕ್ಕೆ ತೀವ್ರ ವಿರೋಧ:-
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರೇಸ್ನಲ್ಲಿದ್ದವರ ಪೈಕಿ ನಾಲ್ಕನೇ ಬಾರಿ ಸದಸ್ಯನಾಗಿರುವ ರಂಗಸ್ವಾಮಿ, ಮೂರನೇ ಬಾರಿ ಸದಸ್ಯರಾಗಿರುವ ರಾಮು, ಸಮಿವುಲ್ಲಾ ಹಾಗೂ ಎರಡು ಬಾರಿಗೆ ಸದಸ್ಯರಾಗಿರುವ ಅರುಣ್ ಕುಮಾರ್ ಅವರುಗಳನ್ನು ಬಿಟ್ಟು ಮೊದಲ ಭಾರಿಗೆ ಸದಸ್ಯರಾಗಿರುವ ಎಸ್.ಕೆ.ನಾಗೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಹೈಕಮಾಂಡ್ ನಿರ್ಧಾರಕ್ಕೆ ಕಾಂಗ್ರೆಸ್ ಹಿರಿಯ ಮುಂಡರು ತೀವ್ರ ಅಸಮದಾನ ವ್ಯಕ್ತಡಿಸಿದ್ದಾರೆ. ರಂಗಸ್ವಾಮಿ ಪುರಸಭೆ ಅಧ್ಯಕ್ಷರಾಗಬೇಕೆಂದು ಜನಾಭಿಪ್ರಾಯ ಹೆಚ್ಚಾಗಿದ್ದರೂ ಜೊತೆಗೆ ಸತತ 30 ವರ್ಷದಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರು. ಅವರನ್ನು ಕಡೆಗಣಿಸಿರುವುದು ರಂಗಸ್ವಾಮಿ ಅವರ ಬೆಂಬಲಿಗರ ಅಸಮದಾನಕ್ಕೆ ಕಾರಣವಾಗಿದೆ.
ಶಾಸಕರಿಗೆ ಧಿಕ್ಕಾರ:-
ಇನ್ನೂ ಅಲ್ಪಸಂಖ್ಯಾತ ಸಮುದಾದ ಸದಸ್ಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ನೂತನ ಪುರಸಭೆ ಅಧ್ಯಕ್ಷರ ಜೊತೆಗೆ ಮೆರವಣಿಗೆಯಲ್ಲಿ ತೆರಳಿತ್ತಿದ್ದ ಶಾಸಕ ಡಾ.ರಂಗನಾಥ್ ಅವರ ವಿರುದ್ದ ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಡಾ.ರಂಗನಾಥ್ ಶಾಸಕರಾಗಲು ಅಲ್ಪಿ ಸಂಖ್ಯಾತ ಸಮುದಾಯದ ಮತಗಳು ಕಾರಣ ಆದರೇ ಪುರಸಭೆಯಲ್ಲಿ ಏಳು ಮಂದಿ ಅಲ್ಪಸಂಖ್ಯಾತ ಸದಸ್ಯರು ಗೆಲವು ಸಾಧಿಸಿದರು ಅವರಿಗೆ ಉಪಾಧ್ಯಕ್ಷ ಸ್ಥಾನವನ್ನಾದರೂ ನೀಡದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡನ್ನು ಒಂದೇ ಸಮುದಾಯಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡದೇ ಅನ್ಯಾಯ ಮಾಡಿದ್ದಾರೆ ಎಂದು ಶಾಸಕರ ವಿರುದ್ದ ಹರಿಹಾಯ್ದರು.
ಮಾನದಂಡ ಯಾವುದು:-
14 ಮಂದಿ ಕಾಂಗ್ರೆಸ್ ಸದಸ್ಯರ ಸಭೆಯನ್ನು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆಸಿದ ಸಂಸದ ಡಿ.ಕೆ.ಸುರೇಶ್ ಅವರು ಎಲ್ಲಾ ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ವೇಳೆ ಬಹುತೇಕ ಸದಸ್ಯರು ಮೊದಲ ಬಾರಿಗೆ ಸದಸ್ಯರಾಗಿರುವ ಎಸ್.ಕೆ.ನಾಗೇಂದ್ರ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ರಂಗಸ್ವಾಮಿ ಅಧ್ಯಕ್ಷ ಮಾತ್ರ ಮಾಡಬೇಡಿ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಈ ಸಂಬಂಧ ಸಂಸದ ಡಿ.ಕೆ.ಸುರೇಶ್ ಅಂತಿಮವಾಗಿ ಎಸ್.ಕೆ.ನಾಗೆಂದ್ರ ಅವರನ್ನು ಅಧ್ಯಕ್ಷರಾಗಲು ಸಮ್ಮತಿಸಿದ್ದಾರೆ. ಎರಡುವರೆ ವರ್ಷದ ಅವಧಿಯಲ್ಲಿ ಮೊದಲ 9 ತಿಂಗಳು ನಾಗೇಂದ್ರ ಅಧ್ಯಕ್ಷ ನಂತರ ಉಳಿದ ಅಕಾಂಕ್ಷಿತರು ಅಧ್ಯಕ್ಷರಾಗಲಿ ಎಂದು ಸಂಸದರು ತಿರ್ಮಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೇ ಇಲ್ಲಿ ಆಯ್ಕೆಯ ಮಾನದಂಡ ಪುರಸಭೆಯ ಸದಸ್ಯರ ಅಭಿಪ್ರಾಯವೇ ಆಗಿದೆ. ಸದಸ್ಯರ ಅಭಿಪ್ರಾಯದ ವಿಚಾರದಲ್ಲಿ ಅಮಿಷದ ಸಾಕಷ್ಟು ಗಾಳಿ ಸುದ್ದಿಗಳು ಪಟ್ಟಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
