ಕುಣಿಗಲ್ :
ಅಜ್ಜಿ ಹಣ ನೀಡಲಿಲ್ಲ ಎಂದು ಮೊಮ್ಮಗ ಕೊಲೆ ಮಾಡಿ ಪರಾರಿಯಾಗಿರುವುದು ವರದಿಯಾಗಿದೆ.
ತಾಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಡಿಯೂರಿನ ಬೀರ್ ಗಾನ ಹಳ್ಳಿ ವಾಸಿ ಜಯಮ್ಮ 65 ಕೊಲೆಯಾದ ಮಹಿಳೆ.
ಜಯಮ್ಮ ತನ್ನ ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು ಸಂಸಾರದಲ್ಲಿ ಕೌಟುಂಬಿಕ ಕಲಹ ಉಂಟಾಗಿತ್ತು ಇತ್ತೀಚಿಗೆ ತಮ್ಮ ನಿಧನ ಹೊಂದಿದ ಈತನಿಗೆ ಬಂದ ವಿಮಾ ಹಣ ಹಂಚಿಕೆ ವಿಚಾರದಲ್ಲಿ ಮೊಮ್ಮಗ ಸಂತೋಷ್ ಹಾಗೂ ಅಜ್ಜಿಯ ನಡುವೆ ಗಲಾಟೆ ನಡೆದು ಕಳೆದ ರಾತ್ರಿ ಅಜ್ಜಿ ಜಯಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಸಿಪಿಐ ಗುರುಪ್ರಸಾದ್ ಪಿಎಸ್ಐ ಮಂಜು ಭೇಟಿ ನೀಡಿ ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/Hanging-death.gif)