ಕುಣಿಗಲ್ :
ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊರವಲಯದಲ್ಲಿ ಸೋಮವಾರ (ಜೂ.21) ಬೆಳಗ್ಗೆ ಟಿಪ್ಪರ್ ಲಾರಿಗೆ ವಿದ್ಯುತ್ ತಂತಿ ತಗುಲಿ ರಾಮನಗರ ಮೂಲದ ಗುರುಪ್ರಸಾದ್ (28) ಎಂಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯು ಹುಲಿಯೂರುದುರ್ಗ ವ್ಯಾಪ್ತಿಯ ಸೋಮೆಶ್ವರ ಕ್ರಷರ್ನ ಟಿಪ್ಪರ್ ಲಾರಿಯಲ್ಲಿ ಕ್ಲಿನರ್ ಆಗಿ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪಟ್ಟಣದ ಹೊರ ವಲಯದ ಪಂಚರ್ ಅಂಗಡಿ ಬಳಿ ಚಾಲಕ ಲಾರಿ ನಿಲ್ಲಿಸಿ ಹೊರಗೆ ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ಲಾರಿಯಲ್ಲಿ ಇದ್ದ ಗುರುಪ್ರಸಾದ್ ಲಾರಿಯ ಮೆಲಿದ್ದ ವಿದ್ದುತ್ ತಂತಿ ಗಮನಿಸದೆ ಲಾರಿಯ ಹಿಂಬದಿಯನ್ನು ಮೇಲೆತ್ತಿದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/photo1-1-e1624340179252.jpg)