ಅಕ್ರಮ ಮದ್ಯ ಸಾಗಾಟ : ವ್ಯಕ್ತಿ ಬಂಧನ

ಕುಣಿಗಲ್ : 

      ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ನವೀನ್ ತಿಳಿಸಿದ್ದಾರೆ.

      ತಾಲೂಕಿನ ಕೊತ್ತಗೆರೆ ಗ್ರಾಮದಲ್ಲಿರುವ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ರಸ್ತೆಯಲ್ಲಿ ಗಸ್ತು ಮಾಡುತ್ತಿರುವಾಗ ರಾಯಗೊಂಡನಹಳ್ಳಿ ಗ್ರಾಮದ ವಾಸಿ ಮುನಿನರಸಯ್ಯ ಎಂಬಾತ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ 8.280 ಲೀಟರ್ ಮದ್ಯ ಹಾಗೂ 7.920 ಲೀಟರ್ ಬಿಯರ್ ಅನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ.

      ದಾಳಿಯನ್ನು ಅಬಕಾರಿ ಉಪ ಆಯುಕ್ತರಾದ ಶೈಲಜಾ ಈ.ಕೋಟೆ ಅವರ ನಿರ್ದೇಶನದಂತೆ ತುಮಕೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಚ್.ಜಿ.ವಿರುಪಾಕ್ಷಪ್ಪ ಮಾರ್ಗದರ್ಶನದಲ್ಲಿ ಅಬಕಾರಿ ವಲಯ ನಿರೀಕ್ಷಕರಾದ ನವೀನ್ ಎ.ಕೆ ಹಾಗೂ ಸಿಬ್ಬಂದಿಗಳಾದ ಶಿವಶಂಕರ್, ಗಂಗಾಧರಯ್ಯ, ವೈಜನಾಥ್, ಮಂಜುನಾಥ್, ತಿರುಮಲೆಗೌಡ, ಸಂತೋಷ್‍ಕುಮಾರ್ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap